ನವದೆಹಲಿ: ದೇಶದಾದ್ಯಂತ ಮೊಬೈಲ್ ವಿಪತ್ತು ಎಚ್ಚರಿಕೆ ವ್ಯವಸ್ಥೆ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ದೇಶದಾದ್ಯಂತ ಸೈರನ್ ಸದ್ದಿನ ಜತೆ ಸಂದೇಶ ಕೂಡ ರವಾನೆ ಆಗಿದೆ. ಇದರಿಂದಾಗಿ ಎಲ್ಲರೂ ಗಾಬರಿ ಪಡುವ ಅಗತ್ಯ ಇಲ್ಲ, ಇದೊಂದ ತುರ್ತು ಪರೀಕ್ಷಾರ್ಥ ಪ್ರಾಯೋಗಿಕ ಸಂದೇಶ ಆಗಿದೆ ಎಂದು ಸರಕಾರವು ತಿಳಿಸಿದೆ.
ಮೇ 2 ರಂದು ದೇಶದಾದ್ಯಂತ ಲಕ್ಷಾಂತರ ಮೊಬೈಲ್ ಫೋನ್ಗಳು ಏಕಕಾಲದಲ್ಲಿ ಜೋರಾಗಿ ಸೈರನ್ ಮೊಳಗಿಸಿವೆ. ಸರ್ಕಾರವು ದೇಶದಾದ್ಯಂತ ಹೊಸ ಮೊಬೈಲ್ ಆಧಾರಿತ ವಿಪತ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಿದೆ. ಈ ಮೊಬೈಲ್ ವಿಪತ್ತು ಸಂವಹನ ವ್ಯವಸ್ಥೆ ಅಥವಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ದೂರಸಂಪರ್ಕ ಇಲಾಖೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ ಡಿಎಂಎ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಜನರನ್ನು ಏಕಕಾಲದಲ್ಲಿ ಎಚ್ಚರಿಸುವುದು ಇದರ ಉದ್ದೇಶ ಆಗಿದೆ.
ಈಗಾಗಲೇ ನವದೆಹಲಿ-ಎನ್ಸಿಆರ್ ಮತ್ತು ಇತರ ಹಲವಾರು ಮೆಟ್ರೋ ನಗರಗಳಲ್ಲಿ ಪರೀಕ್ಷಿಸಲಾಗಿದೆ. ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಚ್ಚರಿಕೆ ಪೋರ್ಟಲ್ ಎಂದು ಹೆಸರಿಸಿದೆ. ಸರ್ಕಾರ ಈ ಸೈರನ್ಗೂ ಮೊದಲು ಎಸ್ ಎಂಎಸ್ ಮೂಲಕ ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಳುಹಿಸಿದ ಸಂದೇಶ ಮೇ 2 ರಂದು ನಿಮ್ಮ ಪ್ರದೇಶದಲ್ಲಿ ‘ಮಾರಾಟ ಪ್ರಸಾರ ಎಚ್ಚರಿಕೆಯನ್ನು ಪರೀಕ್ಷಿಸಲಾಗುವುದು ಎಂದು ಹೇಳುತ್ತದೆ. ನಿಮ್ಮ ಮೊಬೈಲ್ನಲ್ಲಿ ಈ ಸಂದೇಶವನ್ನು ನೀವು ಸ್ವೀಕರಿಸಿದರೆ ಯಾವುದೇ ಕ್ರಮದ ಅಗತ್ಯವಿಲ್ಲ ಮತ್ತು ಭಯಪಡುವ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದೆ.





