ಚೆನ್ನೈ: ಟಿವಿಕೆ ಪಕ್ಷದ ಅಭ್ಯರ್ಥಿಗಳ ಘೋಷಣೆಯ ವೇಳೆ ನಟ- ರಾಜಕಾರಣಿ ವಿಜಯ್ ಅವರ ತೆಗೆದುಕೊಂಡು ತೀರ್ಮಾನವು ತಮಿಳುನಾಡು ರಾಜಕೀಯದಲ್ಲಿ ಹೊಸ ಕ್ರಾಂತಿ ಮೂಡಿಸಿದೆ. ತಮ್ಮ ವಾಹನದ ಚಾಲಕ ಹಾಗೂ ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ವರಿಗೆ ವಿರುಗಂಬಕ್ಕಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಈ ವೇಳೆ ಶಬರಿನಾಥನ್ ಭಾವುಕರಾದರು, ವಿಜಯ್ ಅವರನ್ನು ಅಪ್ಪಿಕೊಂಡರು. ನಟ ವಿಜಯ್ ಅವರು ಅವರನ್ನು ಸಮಾಧಾನಪಡಿಸಿ ಕಣ್ಣೀರು ಒರೆಸಿದರು. ಹಲವು ವರ್ಷಗಳಿಂದ ವಿಜಯ್ ಜತೆ ಇರುವ ರಾಜೇಂದ್ರನ್ ಅವರ ಕಣ್ಣುಗಳಲ್ಲೂ ಕಣ್ಣೀರು ತುಂಬಿ ಬಂತ್ತು.




