ದಾವಣಗೆರೆ: ಉಪ ಚುನಾವಣೆಯ ಹಿನ್ನೆಲೆಯಲ್ಲಿ ದಾವಣಗೆರೆಯ ಬಸವರಾಜ ಪೇಟೆ 1 ನೇ ಕ್ರಾಸ್, 2ನೇಯ ಕ್ರಾಸ್, ಹುಬ್ಬಳ್ಳಿ ಚೌಡಪ್ಪ ಗಲ್ಲಿ, ಮಹಾರಾಜ ಪೇಟೆ ಹಾಗೂ ಹಾಸಭಾವಿ ವೃತ್ತದ ವರೆಗೆ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಮತಯಾಚಿಸಿದರು. ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ, ಅಭ್ಯರ್ಥಿ ಶ್ರೀ ನಿವಾಸ ದಾಸಕರಿಯಪ್ಪ, ಸೇರಿದಂತೆ ಹಲವರು ಇದ್ದರು.





