ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಗೆ ಶಿಕ್ಷೆ ಸ್ವಾಗತಾರ್ಹ: ಶಾಸಕ ವೇದವ್ಯಾಸ್ ಕಾಮತ್

ಕಾಮತ್

ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಸ್ಥಾನವನ್ನು ಗುರಿಯಾಗಿಸಿಕೊಂಡಿದ್ದ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಮೊಹಮ್ಮದ್ ಶಾರೀಖ್ ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು ಸ್ವಾಗತಾರ್ಹ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಸಿಸ್ ಸಂಘಟನೆಯಿಂದ ಪ್ರೇರಣೆಗೊಂಡಿದ್ದ ಇಂತಹವರನ್ನೂ ಸಹ ಆವತ್ತು ಅಮಾಯಕ “ಬ್ರದರ್ಸ್” “ಇದು ಸಣ್ಣ ಘಟನೆ” ಎಂದೆಲ್ಲ ಸಮರ್ಥನೆಗೆ ಇಳಿದಿದ್ದ ಕಾಂಗ್ರೆಸ್ಸಿಗರು ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತೋರುವ ಕಾಂಗ್ರೆಸ್ಸಿಗರಿಂದ ರಾಜ್ಯದ ರಕ್ಷಣೆ ಎಷ್ಟರ ಮಟ್ಟಿಗೆ ಸಾಧ್ಯ ಎಂದು ಈಗ ಜನರಲ್ಲಿ ಪ್ರಶ್ನೆ ಮೂಡುವುದು ಸಹಜ ಆಗಿದೆ. ನ್ಯಾಯಾಲಯವು ನೀಡಿರುವ ತೀರ್ಪು ಶಾರೀಖ್‌ನಂತೆ ಭಯೋತ್ಪಾದನೆಯ ಹಾದಿ ಹಿಡಿವ ಎಲ್ಲ ಉಗ್ರರಿಗೆ ಎಂದಿಗೂ ಮರೆಯಲಾಗದ ಪಾಠ ಆಗಲಿ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಅಂದು ಗಾಯಗೊಂಡಿದ್ದ ಅಮಾಯಕ ಪುರುಷೋತ್ತಮ್ ಪೂಜಾರಿ ಆವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ಪರಿಹಾರ ಸಹಿತ ಹೊಸ ಆಟೋ ರಿಕ್ಷಾ ಒದಗಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು ಒಂದು ಹಂತದ ನ್ಯಾಯ ಆದರೆ, ಇಂದಿನ ನ್ಯಾಯಾಲಯದ ತೀರ್ಪು ಮತ್ತೊಂದು ಹಂತದ ನ್ಯಾಯ ಆಗಿದೆ ಎಂದು ತಿಳಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma