ನವದೆಹಲಿ: ಬಿಜೆಪಿ ಹೈಕಮಾಂಡ್ ರಾಜಕೀಯ ಲೆಕ್ಕಾಚಾರದ ಗುಣಾಕಾರ, ಭಾಗಕಾರವನ್ನು ಮಾಡಿ ಕೊನೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಠರು ಪ್ರಕಟಿಸಿದ್ದಾರೆ. 224 ಸ್ಥಾನಗಳ ಪೈಕಿ 189 ಮಂದಿಯ ಮೊಲದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಬಿಸಿ 32 ಮಂದಿಗೆ ಎಸ್ಸಿ 30, ಎಸ್ಟಿಗೆ 16 ಮಂದಿ 8 ಕ್ಷೇತ್ರಗಳಲ್ಲಿ ಮಹಿಳೆಯರಿಗೆ 52 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ನಿವೃತ್ತ ಐಎಎಸ್, ಐಪಿಎಸ್, 9 ಮಂದಿ ವೈದ್ಯರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಅಥಣಿಯಿಂದ ಮಹೇಶ್ ಕುಮಟಳ್ಳಿ, ಗೋಕಾಕನಿಂದ ರಮೇಶ್ ಜಾರಕಿಹೊಳಿ, ಮುದೋಳದಿಂದ ಕಾರಜೋಳ, ಕಾರವಾರ– ರೂಪಾಲಿ ನಾಯ್ಕ್, ಸಿರಿಸಿ, ಕಾಗೇರಿ, ಕುಮಟಾಕ್ಕೆ ದಿನಕರ ಶೆಟ್ಟಿ, ಯಲ್ಲಾಪುರಕ್ಕೆ ಹೆಬ್ಬಾರ್, ಹಳಿಯಾಳ ಸುನಿಲ ಹೆಗಡೆ, ಭಟ್ಕಳ ಸುನೀಲ ನಾಯ್ಕ, ಕುಂದಾಪುರ ಕಿರಣಕುಮಾರ್ ಕೊಡ್ಗಿ, ಕಾಪುದಿಂದ ಗುರ್ಮೆ ಸುರೇಶ ಶೆಟ್ಟಿ, ಉಡುಪಿಯಿಂದ ಯಶಪಾಲ್ ಸುವರ್ಣ, ಕಾರ್ಕಳದಿಂದ ಸುನೀಲ ಕುಮಾರ್ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವೇದವ್ಯಾಸ್ ಕಾಮತ್, ಪುತ್ತೂರಿನಿಂದ ಆಶಾ ತಿಮ್ಮಪ್ಪ ಬೆಳ್ತಂಗಡಿ– ಹರೀಶ್ ಪೂಂಜ್ , ಮೂಡುಬಿದಿರೆ ಉಮಾನಾಥ ಕೋಟ್ಯಾನ್, ಬಂಟ್ವಾಳ ರಾಜೇಶ್ ನಾಯಕ್, ಉತ್ತರದಿಂದ ಭರತ್ ಶೆಟ್ಟಿ, ಸುಳ್ಯದಿಂದ ಭಾಗಿರಥಿ, ಉಳ್ಳಾಲದಿಂದ ಹರೀಶ್ ಕುಂಪಲ್ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.