
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ರಾಜ್ಯದ ಜನತೆಗೆ ಸಾಲದ ಹೊರೆಯ ಭಾಗ್ಯ ನೀಡಿದೆ. ಅಭಿವೃದ್ಧಿ ಗೆ ಬೇಕಾದ ಚಿಂತನೆಯೇ ಇಲ್ಲದ ಬಜೆಟ್ ಇದಾಗಿದ್ದು, ಕರ್ನಾಟಕವನ್ನು ಸಾಲದತ್ತಾ ತಳ್ಳಲಿದೆ. ಯುವಕರ ಕೈ ಬಲ ಪಡಿಸುವ ಯೋಜನೆಯಿಲ್ಲ. ಮೀನುಗಾರರನ್ನು ನಿರ್ಲಕ್ಷಿಸಲಾಗಿದೆ.ಪ್ರವಾಸೋದ್ಯಮ ವನ್ನು ಸರಕಾರ ಮರೆತಿದೆ.ಪ್ರಗತಿಗೆ ಕೊಡುಗೆ ನೀಡದ ಇದೊಂದು ನೀರಸ ಬಜೆಟ್ ಆಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಆರೋಪಿಸಿದ್ದಾರೆ.




