
ಮಂಗಳೂರು: ಮಗ್ಗಿ ಪುಸ್ತಕ ಕನ್ನಡ ಸಿನಿಮಾ ಕೊರೊನಾ ಕಾಲಘಟ್ಟದ ಹಲವಾರು ಮಜಲುಗಳು ಹಾಗೂ ಮೊಬೈಲ್ ಬಳಕೆಯ ಗೀಳು ಯಾವ ಮಟ್ಟದಲ್ಲಿ ಆವರಿಸಿದೆ ಎಂಬುದರ ಘಟನಾವಳಿಗಳನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಹರಿವರಾಸನಂ ಅವರು ಪ್ರೇಕ್ಷಕರ ಮುಂದೆ ತಂದಿಡುವುದಕ್ಕೆ ವೇದಿಕೆ ಅಣಿ ಮಾಡಿದ್ದಾರೆ. ಅದರ ಭಾಗವಾಗಿ ಮಂಗಳೂರಿನಲ್ಲಿ ಶನಿವಾರ ನಡೆದ ಪ್ರೀಮಿಯರ್ ಶೋ ಪ್ರೇಕ್ಷಕರ ಹೃದಯ ಗೆದ್ದಿದೆ. ಇದೇ 13 ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಕುಟುಂಬ ಸಮೇತರಾಗಿ, ಮಕ್ಕಳೂ ನೋಡಲೇಬಾಕಾದ ಒಂದೋಳ್ಳೆ ಸಿನಿಮಾ ಇದು ಎನ್ನಬಹುದು. ಉತ್ತಮ ಸಂದೇಶವನ್ನು ಹೊಂದಿರುವ ಸಿನಿಮಾ ಮಗ್ಗಿ ಪುಸ್ತಕ. ಚಿನ್ನಸ್ವಾಮಿ ಯತಿರಾಜ್ ಅವರು ಚಿನ್ನಸ್ವಾಮಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.

ಮಗ್ಗಿ ಪುಸ್ತಕ ಸಿನಿಮಾಕ್ಕೆ ಯಶಸ್ ನಾಚಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಖ್ಯಾತ ಗಾಯಕ ಎಂ. ಎಂ. ಕೀರವಾಣಿ ಹಾಡಿದ್ದಾರೆ. ಬಾಹುಬಲಿ ಹಾಗೂ ಆರ್.ಆರ್. ಆರ್ ಖ್ಯಾತಿ ಎಂ.ಎಂ.ಕೀರವಾಣಿ ತುಂಬಾ ವರ್ಷಗಳ ನಂತರ ಕನ್ನಡ ಹಾಡಿಗೆ ಧ್ವನಿ ಆಗುತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಕನ್ನಡದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಗುರುರಾಜ್ ಹೊಸಕೋಟೆ, ನವೀನ್ ಸಜ್ಜು, ಸೈಂಧವಿ, ವೈಕಂ ವಿಜಯಲಕ್ಷ್ಮಿ, ರವೀಂದ್ರ ಸುರಗಾವಿ ಸೇರಿದಂತೆಹಲವು ಗಾಯಕರು ಹಾಡಿದ್ದಾರೆ.

ಎಂ.ಎಂ.ಕೀರವಾಣಿ ಅವರು ಮೂಲತಃ ತೆಲುಗು ಸಂಗೀತ ಸಂಯೋಜಕ, ಗಾಯಕ. ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಯಾವುದೇ ಹಾಡು ಹಾಡಿರಲಿಲ್ಲ. ಡಾ. ವಿಷ್ಣುವರ್ಧನ್ ಅವರ ಅಪ್ಪಾಜಿ, ಜಮೀನ್ದಾರ್ ಸಿನಿಮಾಗಳಲ್ಲಿ ಹಾಡಿದ್ದರು. ಇನ್ನು ಸಿನಿಮಾದಲ್ಲಿ ವಿಷಯವೇ ಪ್ರಧಾನವಾಗಿ ಸಂಗೀತ ಸಂಯೋಜನೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಹರಿವರಾಸನಂ.
ಮಗ್ಗಿ ಪುಸ್ತಕ ಸಿನಿಮಾದ ಚಿತ್ರೀಕರಣ ಬೆಂಗಳೂರು, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ,ಮಂಗಳೂರು, ಎಚ್.ಡಿ. ಕೋಟೆ ಸುತ್ತಲಿನ ಪ್ರದೇಶಗಳಲ್ಲಿ ಸೋಗಸಾಗಿ ಮೂಡಿ ಬಂದಿದೆ. ಹೊಸಬರ ಆ್ಯಕ್ಟಿಂಗ್ ಒಂದು ರೀತಿಯಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಈ ಸಿನಿಮಾಕ್ಕೆ ನಂದಕುಮಾರ್ ಛಾಯಾಗ್ರಹಣ, ಶಿವಕುಮಾರ್ ಸಂಕಲನ ಇದೆ. 7 ಹಾಡುಗಳು ಸಿನಿಮಾಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿವೆ. ಅಪ್ಪ, ಅಮ್ಮನ ಆಸರೆಯಲ್ಲಿ ಬೆಳೆಯುವ ಮಕ್ಕಳಿಗೆ ಯಾವ ರೀತಿಯ ಭರವಸೆ ಇರುತ್ತೆ, ಆನ್ ಲೈನ್ ಕ್ಲಾಸ್ ಗಳು ಯಾವ ರೀತಿಯಾಗಿ ಮಕ್ಕಳನ್ನು ನುಂಗಿ ಹಾಕಿತು, ಮೊಬೈಲ್ ಬಳಕೆಯ ಸಾಧಕ– ಬಾಧಕಗಳ ಬಗ್ಗೆ ಯಾವೆಲ್ಲ ಜಾಗೃತಿ ಅಗತ್ಯ ಎಂಬುದನ್ನು ನಿರ್ದೇಶಕ ಹರಿವರಾಸನಂ ಸೋಗಸಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.
ಮಗ್ಗಿ ಪುಸ್ತಕ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ರಂಜನ್ ಕಾಸರಗೋಡು, ರಕ್ಷ ಗೌಡ, ಮೇಘನಾ, ರಾನ್ವಿ ಶೇಖರ್,ಮೈಸೂರು ರಮಾನಂದ್, ಶೋಭರಾಜ್, ಕೃಷ್ಣ ಮಹೇಶ್ ಇನ್ನೂ ಅನೇಕರ ದೊಡ್ಡ ಪಟ್ಟಿಯೇ ಇದೆ. ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿವೆ.

Mangalore: Harivarasanam, who has written and directed the story, screenplay, dialogues and dialogues of the Kannada film Maggi Pusthaka, has set the stage for bringing the events of the Corona era and the extent to which the mobile phone addiction has taken hold in front of the audience. As part of that, the premiere show held in Mangalore on Saturday has won the hearts of the audience. It will be screened across the state on the 13th.
This is a must-see film for families and children. Maggi Pusthaka is a film with a good message. The film has been produced by Chinnaswamy Yathiraj under the Chinnaswamy banner.


