ಉಡುಪಿ: ದುಬೈ ಶ್ರೀ ರಾಘವೇಂದ್ರ ಸೇವಾ ಸಮಿತಿ ಸದಸ್ಯರಿಂದ ಭಾವಿ ಪರ್ಯಾಯ ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭವ್ಯ ಸ್ವಾಗತದೊಂದಿಗೆ ದುಬೈಗೆ ಬರಮಾಡಿಕೊಳ್ಳಲಾಯಿತು.
ಈ ವೇಳೆ ಸಮಿತಿಯ ಸದಸ್ಯರು ಶ್ರೀಗಳಿಗೆ ಸಾಮೂಹಿಕ ಪಾದಪೂಜೆ, ತೊಟ್ಟಿಲು ಪೂಜಾ ಸೇವೆ ನಡೆಸಿ, ಭವ್ಯ ಅಭಿನಂದನಾ ಕಾರ್ಯಕ್ರಮ ನೆರವೇರಿಸಲಾಯಿತು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮತ್ತು ಅರ್ಚಕ ಶ್ರೀಪತಿ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು. ದುಬೈಯಲ್ಲಿ ನೂರಾರು ಮಂದಿಯನ್ನು ಭಗವದ್ಗೀತಾ ಪ್ರಚಾರಕ್ಕೆ ಪ್ರೇರೇಪಿಸಿದ ಸುರೇಶ್ ಅವರನ್ನು ಸನ್ಮಾನಿಸಲಾಯಿತು .
- ಸಂಯೋಜಕ ಹರಿಪ್ರಸಾದ್ ವಂದಿಸಿದರು. ಶ್ರೀಪಾದರು ದುಬೈ, ಅಬುದಾಭಿಯಲ್ಲಿ ಡಿಸೆಂಬರ್ 23 ರವರೆಗೆ ಸಂಚಾರ ಮಾಡಲಿದ್ದಾರೆ.