Breaking News

ಬಂಟ್ವಾಳ: ಸಾನಿಧ್ಯ ವಸತಿಯುತ ಶಾಲೆಯ ಮಕ್ಕಳಿಂದ ಕಲ್ಲಟ್ಟಿ ಕಲ್ಕುಡ ನಾಟಕ ಪ್ರದರ್ಶನ

 

ಬಂಟ್ವಾಳ:  ತಾಲ್ಲೂಕಿನ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಹಾಗೂ ಸಾರ್ವಜನಿಕ ಶಾರದೋತ್ಸವ ಸಮಿತಿ ರಾಯಿ, ಕೊಯ್ಲಾ ಆಶ್ರಯದಲ್ಲಿ ನಡೆದ ಶಾರದೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ವಿಶೇಷ ವಿದ್ಯಾರ್ಥಿಗಳು  ಕಲ್ಲಟ್ಟಿ ಕಲ್ಕುಡ ಎಂಬ ದೈವಾರಾಧನೆಯ ಭಕ್ತಿ ಪ್ರಧಾನ ನಾಟಕವನ್ನು ಪ್ರದರ್ಶನ ಮಾಡಿದರು.

ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ  ಡಾ.ವಸಂತ್ ಕುಮಾರ್ ಶೆಟ್ಟಿ ಅವರು ಈ ನಾಟಕವನ್ನು ರಚಿಸಿ, ನಿರ್ದೇಶನ ಮಾಡಿದ್ದಾರೆ. ನಾಟಕ ವೀಕ್ಷಣೆ ಮಾಡಿದ ಪ್ರೇಕ್ಷಕರು ವಿಶೇಷ ಮಕ್ಕಳ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

  1.  

Leave a Reply

Your email address will not be published. Required fields are marked *