ಮಂಗಳೂರು: ಕಾಶೀ ಮಠಾಧಿಪತಿ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವ್ರತದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಶುಕ್ರವಾರ ಮುಂಬೈ ವಾಲ್ಕೆಶ್ವರದ ಕಾಶೀಮಠದಲ್ಲಿ ನಡೆಯಿತು.
ಶುಭದ ಗಾಯಕವಾಡ್ ಹಾರ್ಮೋನಿಯಂ ಸಾಥ್ ನೀಡಿದರು. ರಾಜೇಶ್ ಪೈ ತಬಲಾ ಸಾಥ್ ನೀಡಿದರು. ಪಾಕ್ವಾಜ್ ನಲ್ಲಿ ಉಮೇಶ್ ಮಲ್ಲಿಕ್ ಹಾಗೂ ಮಂಜರಿಯಲ್ಲಿ ಕೃಷ್ಣ ಮಲಿಕ್ ಸಾಥ್ ನೀಡಿದರು. ಹಿರಿಯ ಸಂಗೀತ ಕಲಾವಿದ ಮುಂಬೈ ಪದ್ಮನಾಭ ಪೈ ಇದ್ದರು.