ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಚಿತ್ತಾಕುಲ್ ಸೀಬರ್ಡ್ ಕಾಲೊನಿಯ ಪುಟ್ಟ ಬಾಲಕ ಕೃಷ್ಣನ ವೇಷಭೂಷಣಗಳನ್ನು ಧರಿಸಿ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಎಲ್ಲರ ಗಮನ ಸೆಳೆದಿದ್ದಾನೆ.
2 ವರ್ಷದ ಪುಟ್ಟ ಬಾಲಕ ಶ್ರೀಯಾಂಶ್ ಹರೀಶ್ ತಾಂಡೇಲ್ ಕೃಷ್ಣ ಜನ್ಮಾಷ್ಠಮಿಯ ದಿನ ಕೃಷ್ಣನ ಉಡುಗೆ ಧರಿಸಿ, ಕೈಯಲ್ಲಿ ಕೊಳಲು ಹಿಡಿದು ಮೊಸರು ಕುಡಿಕೆಯಲ್ಲಿನ ಮೊಸರು ತಿನ್ನುವ ದೃಶ್ಯಗಳು ಮನಮೋಹಕವಾಗಿವೆ.
ಶ್ರೀಯಾಂಶ್ ಚಿತ್ತಾಕುಲ್ ದ ಹರೀಶ್ ರಾಮದಾಸ ತಾಂಡೇಲ ಹಾಗೂ ವೀಣಾ ತಾಂಡೇಲ ಎಂಬುವವರ ಪುತ್ರ. ಪೋಷಕರು ಪುಟ್ಟ ಬಾಲಕನಿಗೆ ಕೃಷ್ಣನ ಧಿರಿಸುಗಳಲ್ಲಿ ಸಿಂಗಾರ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಿಸಿ ಸಂಭ್ರಮಿಸಿದರು.