ಬೆಂಗಳೂರು: ನಗರದ ಸಂತ್ ಜೋಸೆಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫಾರ್ಮೇಷನ್ ವತಿಯಿಂದ ಈಚೆಗೆ ಎಐಸಿಟಿಇ ಪ್ರತಿಷ್ಠಿತ ವೃತ್ತಿಪರ ಯೋಜನೆ ಅಡಿ ಉದ್ಘಾಟನಾ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ವಿವಿ ಮಾಜಿ ಕುಲಪತಿ ಹಾಗೂ ಐಇಇಇ ಫೆಲೋ ಆದ ಖ್ಯಾತ ಶಿಕ್ಷಣ ತಜ್ಞ ಡಾ. ವೇಣುಗೋಪಾಲ್ ಕೆ. ಆರ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರೇಟಿವ್ ಎಐ ಮತ್ತು ಫ್ಯೂಚರ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉದಯೋನ್ಮುಖ ತಾಂತ್ರಿಕ ಪ್ರವೃತ್ತಿಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ನಾವೀನ್ಯತೆ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ವಿಮರ್ಶಾತ್ಮಕವಾಗಿ ಯೋಚಿಸಲು ಪ್ರೇರೇಪಿಸಿದರು.
ಅಧ್ಯಾಪಕರ ಜತೆಗೆ ನಡೆದ ಸಂಶೋಧನಾ ಪ್ರಕ್ರಿಯೆಯ ಸಂವಾದವು ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿತು. ಈ ಕಾರ್ಯಕ್ರಮದ ಸಂಚಾಲಕ ಡಾ. ಶಿವಕುಮಾರ್ ಟಿ. ಅವರ ಸಕ್ರಿಯ ಮುತುವರ್ಜಿಯಿಂದಾಗಿ ಈ ಪ್ರತಿಷ್ಠಿತ ಅನುದಾನವು ಸಂಸ್ಥೆಗೆ ಲಭಿಸಿದೆ. ಡೀನ್ ಡಾ. ಬೋಜಮ್ಮ, ವಿಭಾಗದ ಮುಖ್ಯಸ್ಥ ಡಾ. ಬಿ. ಜಿ. ಪ್ರಶಾಂತಿ ಮತ್ತು ಡಾ. ಜಯತಿ ಭದ್ರಾ ಹಾಗೂ ಕಂಪ್ಯೂಟರ್ ಸಾಯಿನ್ಸ್ ಮತ್ತು ಅಡ್ವಾನ್ಸ್ಡ್ ಕಂಪ್ಯೂಟಿಂಗ್ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.



