
ಉಡುಪಿ: ಭಾರತದಲ್ಲಿ ಲಿಂಗ ತಾರತಮ್ಯ ಹೆಣ್ಣು ಮಕ್ಕಳ ಶಿಕ್ಷಣದ ಅರಿವು ಹೆಣ್ಣು ಮಕ್ಕಳನ್ನು ಉಳಿನ, ಬೆಳೆಸಿ ಪೋಷಿಸುವ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಆಗಲಿದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಅಶೋಕ ಅವರು ಹೇಳಿದರು.
ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪ್ರಸೂತಿ ತಜ್ಞೆ ಡಾ.ಕವಿತಾ, ಮಕ್ಕಳ ತಜ್ಞ ಡಾ.ಅಮರನಾಥ್ ಉಸ್ತ್ರಿ ಅವರು ಹೆಣ್ಣು ಮಕ್ಕಳ ಮಹತ್ವದ ಬಗ್ಗೆ ವಿವರಿಸಿದರು.
ಆಸ್ಪತ್ರೆ ಆಡಳಿತಾ ವೈದ್ಯಾಧಿಕಾರಿ ಡಾ.ಸಂದೀಪ್ ಹಾಗೂ ಡಾ. ಐಶ್ವರ್ಯ, ಪ್ರಸೂತಿ ತಜ್ಞೆ ಪ್ಲೋರಾ ಡಿ ಆಲ್ಲೇಡ ಇದ್ದರು. 2026, ಜನವರಿ 24ರಂದು ಜನಿಸಿದ ಮೂರು ನವಜಾತ ಶಿಶುಗಳಿಗೆ ಕಿಟ್ ಅನ್ನು ವಿತರಿಸಲಾಯಿತು.
ಬಾಣಂತಿ ವಾರಿಜ ಅವರು ತನಗೆ ಹೆಣ್ಣು ಮಗು ಜನಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿ, ಹೆಣ್ಣು ಮಕ್ಕಳ ದಿನಾಚರಣೆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು, ಮತ್ತು ಸಿಬ್ಬಂದಿ ಹಾಗೂ ಬಾಣಂತಿಯರು ಈ ಕಾರ್ಯಕ್ರಮದಲ್ಲಿ ಇದ್ದರು. ಆಪ್ತಸಮಾಲೋಚಕಿ ವಿದ್ಯಾ ಸುವರ್ಣ ನಿರೂಪಿಸಿದರು. ಶುಕ್ರೂಷಕಧಿಕಾರಿ ರೇಣುಕಾ ವಂದಿಸಿದರು. ಇದೇ ವೇಳೇ ಸಿಹಿ ತಿಂಡಿ ವಿತರಿಸಲಾಯಿತು.


