Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

January 25, 2026

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026
Facebook X (Twitter) Instagram
Trending
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
  • ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್
  • ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ಸಂಚಾರ ಸಮಸ್ಯೆ, ಸಾರ್ವಜನಿಕ ಸಭೆ: ಸಂಸದ ಕ್ಯಾ. ಚೌಟ
  • ಕೇಂದ್ರದ ಧೋರಣೆ ವಿರುದ್ದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ, ಮನರೇಗಾ ಹೆಸರು ಬದಲಾವಣೆ ಸಹಿಸಲ್ಲ
  • ಕೃಷ್ಣ ಜೆ. ರಾವ್ ಪ್ರಕರಣ: 31 ರೊಳಗೆ ಮದುವೆ ನಡೆಯದೇ ಇದ್ದಲ್ಲಿ ಫೆ. 7 ಕ್ಕೆ ನಾಮಕರಣ: ಪ್ರತಿಭಾ ಕುಳಾಯಿ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ಸಂಚಾರ ಸಮಸ್ಯೆ, ಸಾರ್ವಜನಿಕ ಸಭೆ: ಸಂಸದ ಕ್ಯಾ. ಚೌಟ

ಜಿಲ್ಲೆ

ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ಸಂಚಾರ ಸಮಸ್ಯೆ, ಸಾರ್ವಜನಿಕ ಸಭೆ: ಸಂಸದ ಕ್ಯಾ. ಚೌಟ

KaravalidailynewsBy KaravalidailynewsJanuary 24, 2026No Comments1 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

 

ಮಂಗಳೂರು: ಇಲ್ಲಿನ ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನಲ್ಲಿ ಪದೇ ಪದೇ ಗೂಡ್ಸ್‌ ರೈಲು ಹಾಗೂ ಖಾಲಿ ಪ್ಯಾಸೆಂಜರ್‌ ರೈಲು ಹಾದು ಹೋಗುವುದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಹಾಗೂ ಸಂಚಾರ ಸಮಸ್ಯೆ ತಪ್ಪಿಸಲು ತುರ್ತಾಗಿ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳೂರು ವ್ಯಾಪ್ತಿಯ ರೈಲ್ವೆ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿ, ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನಲ್ಲಿ ದಿನನಿತ್ಯ ಹತ್ತಾರು ಬಾರಿ ಗೂಡ್ಸ್‌ ಹಾಗೂ ಪ್ಯಾಸೆಂಜರ್‌ ರೈಲುಗಳು ಮಂಗಳೂರು ಸೆಂಟ್ರಲ್‌ನಿಂದ ಬಂದರ್‌ ಗೂಡ್ಸ್‌ ಶೆಡ್‌ಗೆ ಹಾದು ಹೋಗುವ ವೇಳೆ ರೈಲ್ವೆ ಗೇಟ್‌ ಹಾಕುವುದರಿಂದ ಜನರು ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿಯಿದೆ. ಹೀಗಾಗಿ, ಈ ಕೂಡಲೇ ರೈಲ್ವೆಗೇಟ್‌ ಬಳಿ ರೈಲು ಓಡಾಡುವ ಸಮಯದ ಬಗ್ಗೆ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್‌ ಹಾಕಬೇಕು. ಅಲ್ಲದೆ, ಕಚೇರಿ ವೇಳೆಯಲ್ಲಿ ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ತಡೆ ಹಿಡಿಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಪಾಂಡೇಶ್ವರ ಲೆವಲ್‌ ಕ್ರಾಸಿಂಗ್‌ನಲ್ಲಿ ಪದೇಪದೇ ಗೇಟ್‌ ಹಾಕುವುದರಿಂದ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರು ಹಲವಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ, ಈ ಲೆವೆಲ್‌ ಕ್ರಾಸಿಂಗ್‌ನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯತೆಯಿಂದ ಒಂದು ಸಮಗ್ರ ವರದಿಯನ್ನು ತಯಾರಿಸಬೇಕು. ಆ ವರದಿ ಆಧರಿಸಿ ರೈಲ್ವೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ-ಮಾರ್ಗೋಪಾಯಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಶಾಸಕ ವೇದವ್ಯಾಸ ಕಾಮತ್‌ ಅವರು ಮಾತನಾಡಿ, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಮೂಲಕ ದಿನಕ್ಕೆ 10 ರಿಂದ 15 ಬಾರಿ ಖಾಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಬಂದರು ಯಾರ್ಡ್ ಗೆ ಹೋಗುವುದರಿಂದ ಪ್ರತಿ ಬಾರಿ 15 ರಿಂದ 20 ನಿಮಿಷ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಉದ್ಯೋಗಿಗಳು, ಆಂಬುಲೆನ್ಸ್ ಮತ್ತಿತರ ತುರ್ತು ಸೇವೆ ವಾಹನಗಳಿಗೆ ಅಡಚಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ನನಗೆ ದೂರು ಬಂದಿದ್ದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮಾತನಾಡಿ, ರೈಲು ಬರುವ ಸಮಯವನ್ನು ಆಯಾ ಪ್ರದೇಶಗಳಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದರೆ ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಬಳಸಿಕೊಳ್ಳಲು ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಯಿಗೆ ಬಜಾರ್ ಲೆವೆಲ್ ಕ್ರಾಸಿಂಗ್ ಬಳಿಯೂ ಇದೇ ರೀತಿಯಲ್ಲಿ ಸಂಚಾರ ಸಮಸ್ಯೆ ಆಗುತ್ತಿರುವ ಕಾರಣ ಯಾರ್ಡ್‌ ಅನ್ನೇ ಸ್ಥಳಾಂತರಿಸುವ ಬಗ್ಗೆ ಹಾಗೂ ಬೇರೆಡೆ ಸೂಕ್ತ ಜಾಗ ನಿರ್ಧರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್, ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಿರಿಯ ಎಂಜಿನಿಯರ್ ನರೇಶ್ ಶೆಣೈ, ಪ್ರಮುಖರಾದ ಧರ್ಮರಾಜ್, ರವಿಶಂಕರ್ ಮಿಜಾರು, ನಿತಿನ್ ಕುಮಾರ್ ಇದ್ದರು.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

January 25, 2026

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
  • ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (714)
  • ಆರೋಗ್ಯ (230)
  • ಇ-ಪೇಪರ್ (8)
  • ಉಡುಪಿ (3,597)
  • ಎಜುಕೇಶನ್ (609)
  • ಓದುಗರ ಅಂಕಣ (33)
  • ಕಾರವಾರ (3,958)
  • ಕುಂದಾಪುರ (3,563)
  • ಕ್ರೀಡೆ (319)
  • ಚುನಾವಣೆ (506)
  • ಜಿಲ್ಲೆ (6,574)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (60)
  • ದೇಶ ವಿದೇಶ (451)
  • ಪಾಡಕಾಸ್ಟ್ (12)
  • ಪುತ್ತೂರು (5,213)
  • ಮಂಗಳೂರು (5,285)
  • ರಾಜಕೀಯ (1,156)
  • ರಾಜ್ಯ (4,496)
  • ವಿಶೇಷ ವರದಿ (55)
  • ಶಿರಸಿ (3,892)
  • ಸಿನಿಮಾ (212)
Recent Post
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಅಪರಾಧ

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

By KaravalidailynewsJanuary 25, 2026112

ಕಾರವಾರ( ಬಿಣಗಾ): ಉತ್ತರ ಕನ್ನಡ ಜಿಲ್ಲೆಯ ಕಾರವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಡಾಂಬರ್…

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026

ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ

January 24, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.