Breaking News
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಶಿರಸಿ

ಅಬಕಾರಿ ಅಧಿಕಾರಿಗಳ ದಾಳಿ, 5.57 ಲಕ್ಷ ಮೌಲ್ಯದ ಸ್ವತ್ತು ವಶ, ಆರೋಪಿ ನ್ಯಾಯಾಂಗ ವಶಕ್ಕೆ

 

ಮಂಗಳೂರು: ಇಲ್ಲಿನ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರು ದ. ಕ. ಜಿಲ್ಲೆ ಮಂಗಳೂರು ಅವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು, ಅಬಕಾರಿ ನಿರೀಕ್ಷರರು, ತಲಪಾಡಿ ತನಿಖಾ ಠಾಣೆ ಅಬಕಾರಿ ನಿರೀಕ್ಷಕರು ಮತ್ತು ಮಂಗಳೂರು ದಕ್ಷಿಣ ವಲಯ -1 ರ ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ವಲಯದ ಅಬಕಾರಿ ಉಪ ನಿರೀಕ್ಷಕರು-1 ಅವರು ಸಿಬ್ಬಂದಿ ಮಂಗಳೂರು ದಕ್ಷಿಣ ವಲಯ-1 ವ್ಯಾಪ್ತಿಯ, ಕದ್ರಿ, ಲೋಬೊ ಲೇನ್, ಎಂಬಲ್ಲಿ ಮೈಕಲ್, ಬ್ಲೈಸ್ ಮಿನೀಜಸ್ ಎಂಬುವವರ ಮನೆ ಮೇಲೆ ದಾಳಿ ಮಾಡಿ ಆರೋಪಿ ಮನೆಯಲ್ಲಿ ಸಂಗ್ರಹಿಸಿದ್ದ ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸುವ ಕೊಳೆ 1,500 ಲೀಟರ್, ಮದ್ಯ – 3.180 ಲೀಟರ್, ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.

  1.  

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿ ವಿರುದ್ಧ ಅಬಕಾರಿ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಂಡು ಅಬಕಾರಿ ಉಪ ನಿರೀಕ್ಷಕ ಹರೀಶ್ ಪಿ. ಅವರು ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಸ್ವತ್ತಿನ ಅಂದಾಜು ಮೌಲ್ಯ ರೂ. 5,57 ಲಕ್ಷ ಆಗಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.

  1.  

Related posts

ತರಹೇವಾರಿ ಮೀನುಗಳ ವೀಕ್ಷಣೆಗೆ ಮೀನುಗಾರಿಕಾ ಸಂಶೋಧನಾ ಕೇಂದ್ರ ವೇದಿಕೆ

Karavalidailynews

ಮೂಡುಬಿದಿರೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಮೆದುಳು ಜ್ವರ, ಚಿಕಿತ್ಸೆಗೆ ಸ್ಪಂದಿಸದೇ ಸಾವು

Karavalidailynews

ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ, ಏಷ್ಯನ್ ಗೇಮ್ಸ್ ವಿಜೇತರಿಗೆ 50 ಲಕ್ಷ ಬಹುಮಾನ ಘೋಷಣೆ: ಸಿಎಂ ಸಿದ್ದರಾಮಯ್ಯ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com