Breaking News

ಮಂಗಳೂರು: ಪೂರ್ವಿ ಹೌಸಿಂಗ್ ಎಸ್ಟೀಲಾ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ವೇದವ್ಯಾಸ್ ಕಾಮತ್

 

ಮಂಗಳೂರು: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಜನರಿಗೆ ಕೂಡ ತಮಗೆ ಸ್ವಂತ ಮನೆ ಬೇಕು ಎಂಬ ಕನಸಿಗೆ ಇಂಬುಕೊಡುವಂತಹ ಕೆಲಸವನ್ನು ಕಟ್ಟಡ ನಿರ್ಮಾಣ ಉದ್ದಿಮೆದಾರರು ಮಾಡುತ್ತಿದ್ದು, ಜನರ ಬಜೆಟ್ ಗೆ ತಕ್ಕಂತ ಮನೆಗಳ ನಿರ್ಮಾಣ ಕೆಲಸ ಆಗುತ್ತಿದೆ. ಮಂಗಳೂರು ಮತ್ತಷ್ಟು ವೇಗವಾಗಿ ಬೆಳೆಯಬೇಕು, ಆರ್ಥಿಕವಾಗಿ ಬೆಳೆಯಲು ಸಾಕಷ್ಟು ಅವಕಾಶಗಳು ಇವೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಮಂಗಳೂರಿನಲ್ಲಿ ಪೂರ್ವಿ ಹೌಸಿಂಗ್ ಡವಲಪ್ ಮೆಂಟ್ ಕಂಪನಿ ಪ್ರೈವೆಟ್ ಲಿಮಿಟೆಡ್ ನ ಪೂರ್ವಿ ಎಸ್ಟೀಲಾದ ಐಶಾರಾಮಿ ಅಪಾರ್ಟ್ ಮೆಂಟ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಾಕ್ಷಷ್ಟು ಮಟ್ಟದಲ್ಲಿ ಕ್ರಾಂತಿ ಆಗುತ್ತಿದ್ದು, ಇದೀಗ ಮಂಗಳೂರಿಗೆ ಹೊಸ ಯೋಜನೆಯೊಂದಿಗೆ ಪೂರ್ವಿ ಹೌಸಿಂಗ್ ನವರು ಅಡಿ ಇಟ್ಟಿದ್ದು, ಈ ಯೋಜನೆ ಜತೆಗೆ ಅವರಿಗೆ ಮತ್ತಷ್ಟು ಅವಕಾಶಗಳು ಹುಡುಕಿ ಬರಲಿ ಎಂದರು.

ಮಂಗಳೂರು ಬೆಳೆಯುತ್ತಿರುವ ನಗರ, ಇದು ಪರಶುರಾಮನ ಸೃಷ್ಟಿ, ಶಿಕ್ಷಣ, ಪ್ರವಾಸೋದ್ಯಮ, ವೈದ್ಯಕೀಯ ಕ್ಷೇತ್ರಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಇದ್ದು, ಸಾಕಷ್ಟು ಉದ್ದಿಮಗಳನ್ನು ಆಕರ್ಷಣೆ ಮಾಡುವ ಎಲ್ಲ ಸೌಲಭ್ಯಗಳು ಮಂಗಳೂರಿನಲ್ಲಿ ಇವೆ. ಪೂರ್ವಿ ಹೌಸಿಂಗ್ ಸಂಸ್ಥೆಗೆ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಮಂಗಳೂರಿಗೆ ದಾಪುಗಾಲು ಹಾಕಿರುವುದು ಸಂತಸ ಎಂದರು.

ಪೂರ್ವಿ ಹೌಸಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್ ನಾಯಕ್ ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರಕ್ಕೆ ಬಂದು 2 ದಶಕಗಳು ಆಗಿವೆ. ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಕಷ್ಟು ಫ್ಲ್ಯಾಟ್ ಗಳನ್ನು ನಿರ್ಮಾಣ ಮಾಡಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮನೆಗಳನ್ನು ವಾಸಕ್ಕೆ ನಿರ್ಮಾಣ ಮಾಡಿದ್ದೇವೆ. ಮಂಗಳೂರಿಗೆ ಒಂದು ಹೊಸ ಯೋಜನೆಯನ್ನು ತೆಗೆದುಕೊಂಡು ಬಂದಿದ್ದೇವೆ ಎಂದರು.

ಪೂರ್ವಿ ಹೌಸಿಂಗ್ ಪ್ರಾಜೆಕ್ಟ್ ಹೆಡ್ ಪ್ರಕಾಶ್ ಕುಮಾರ್, ಡೈಜಿ ವಲ್ಡ್ ಮುಖ್ಯಸ್ಥ ವಾಲ್ಟರ್,  ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *