ಮಂಗಳೂರು: ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದಲ್ಲಿ ಭಾನುವಾರ ಸಂಜೆ ಹೊತ್ತಿನಲ್ಲಿ ಗುಡುಗು ಸಿಡಿಲು, ಮಿಂಚಿನ ಜತೆಗೆ ವ್ಯಾಪಕ ಮಳೆ ಸುರಿಯಿತು. ಶನಿವಾರದಿಂದಲೇ ಮೋಡ ಕವಿದ ವಾತಾವರಣ ಇದ್ದರೂ ಕೂಡ ಸೆಖೆ ಹೆಚ್ಚಾಗಿತ್ತು. ಮುಕ್ಕಾಲು ಗಂಟೆ ಸುರಿದ ಧಾರಾಕಾರ ಮಳೆಗೆ ರಸ್ತೆಯ ಮೇಲೆ ಮಳೆ ಹರಿಯಿತು.
ಹವಾಮಾನ ಇಲಾಖೆ ಕೂಡ ಮಳೆ ಸುರಿಯುವ ಸಾಧ್ಯತೆ ಇದೇ ಎಂದು ಮುನ್ಸೂಚನೆ ನೀಡಿತ್ತು. ಮಂಗಳೂರಿನಲ್ಲಿ ದಸರಾ ಹಬ್ಬದ ಕಳೆ ಕಟ್ಟಿದ್ದು, ಇದರ ಜತೆಗೆ ವ್ಯಾಪಕ ಮಳೆ ಸುರಿದ ಪರಿಣಾಮ ಜನರಿಗೆ ಕೊಂಚ ಸಮಸ್ಯೆ ಉಂಟಾಯಿತು.