ಮಂಗಳೂರು: ಶಾರದಾ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿಈಚೆಗೆ ಸಂಸ್ಥೆಯ ಸರಸ್ವತಿ ಮಂದಿರದಲ್ಲಿ ಅದ್ದೂರಿಯಾಗಿ ಹಿಂದಿ ದಿವಸ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಕೃತ ಉಪನ್ಯಾಸಕ ಶುಭಕರ.ಕೆ ಅವರು ಪ್ರಾರ್ಥಿಸಿದರು.
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಎಂಬ ವಿಷಯದ ಅಡಿಯಲ್ಲಿ ಎಲ್ಲಾ ಕಾರ್ಯಕ್ರಮ ನಾರೀ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ನಡೆಯಿತು. ಹಲವು ನೃತ್ಯ ಪ್ರದರ್ಶನ, ಪ್ರಹಸನ, ನಾಟಕ, ರೂಪಕ ಮತ್ತು ಮೂಕಾಭಿನಯ ಇತ್ಯಾದಿಗಳು ಹಿಂದಿ ಭಾಷೆಯಲ್ಲಿ ಮನೋಜ್ಞವಾಗಿ ಮೂಡಿ ಬಂದವು.
ಪ್ರಾಂಶುಪಾಲ ವಿನಾಯಕ್ ಬಿ ಜಿ ಅವರು ಮಾತನಾಡಿ, ಹಿಂದಿ ರಾಜ್ಯ ಭಾಷೆ, ಇದು ದೇಶದ ಜನರನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಹಿಂದಿ ವಿಭಾಗದ ಮುಖ್ಯಸ್ಥ ಸುರೇಂದ್ರ ಕಾಮ್ಕರ್ ಅವರ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸುಂದರವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ನಾರೀಶಕ್ತಿಯ ಬಗ್ಗೆ ವಿದ್ಯಾರ್ಥಿಗಳು ನೀಡಿದ ಸಂದೇಶ ಮನಮುಟ್ಟುವಂತಿದ್ದವು.