Breaking News

ಸಿಎಂ ಸಿದ್ದರಾಮಯ್ಯಗೆ ಎಫ್ ಐಆರ್ ಉರುಳು, ಸಿದ್ದರಾಮಯ್ಯ ಎ1, ಪತ್ನಿ ಪಾರ್ವತಿ ಎ 2 ಆರೋಪಿ, ಲೋಕಾ ಕುಣಿಕೆ ಮತ್ತಷ್ಟು ಬಿಗಿ

 

ಮೈಸೂರು: ಮೂಡಾ ಹಗರಣಕ್ಕೆ ಸೇರಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಎಫ್ ಐಆರ್ ದಾಖಲಾಗಿದೆ. ಸಿದ್ದರಾಮಯ್ಯ ಎ1 ಆರೋಪಿ, ಪತ್ನಿ ಪಾರ್ವತಿ ಅವರು 2ನೇ ಆರೋಪಿ ಆಗಿದ್ದು, ಅವರ ಬಾಮೈದ ಮಲ್ಲಿಕಾರ್ಜುನ 3ನೇ ಆರೋಪಿ ಆಗಿದ್ದಾರೆ. ಈ ಮೂವರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ.

  1.  

ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಸ್ಪಿ ಉದೇಶ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭೂಮಿ ಮಾರಾಟ ಮಾಡಿರುವ ದೇವರಾಜು ಅವರು  ನಾಲ್ಕನೇ ಆರೋಪಿ ಆಗಿದ್ದಾರೆ.

ಎಫ್ ಐಆರ್ ದಾಖಲಾಗಿದ್ದು, ಮೂಡಾ ಸಂಕಷ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿದೆ.  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಖಾಸಗಿ ದೂರು ದಾಖಲಿಸಿದ್ದರು. ಈ ನಡುವೆ ಪ್ರಕರಣ ಸಂಬಂಧ 3 ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ  ಕೋರ್ಟ ಆದೇಶ ನೀಡಿದೆ.

  1.  

Leave a Reply

Your email address will not be published. Required fields are marked *