Breaking News

ಇದೇ 13 ರಂದು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ನ್ಯಾಸ, ಷಢಾಧಾರ ಪ್ರತಿಷ್ಠೆ

 

ಮಂಗಳೂರು: ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಡ್ಯಾರ್ ನಲ್ಲಿ ನೂತನವಾಗಿ ನಿರ್ಮಿಸುವ ಶಿಲಾಮಯ ಗರ್ಭಗುಡಿಯ ಪಾದುಕಾ ನ್ಯಾಸ” ಮತ್ತು ಷಢಾಧಾರ ಪ್ರತಿಷ್ಠೆಯು ಕ್ಷೇತ್ರದ ತಂತ್ರಿ ವಾಮಂಜೂರು ಅನಂತ ಉಪಾಧ್ಯಾಯ ಅವರ ನೇತೃತ್ವದಲ್ಲಿ ಜರುಗಲಿದೆ.
ಇದೇ 12 ರಂದು ಸಂಜೆ 6 ರಿಂದ ಪುಣ್ಯಾಹ – ವಾಸ್ತುಪೂಜೆ ವಾಸ್ತು ಬಲಿ -ಗರ್ಭನ್ಯಾಸ – ಇಷ್ಟಿಕಾನ್ಯಾಸ – ಹೋಮ , 13 ರಂದು ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಪಾದುಕಾನ್ಯಾಸ – ಷಡಾಧಾರ ಕಾರ್ಯಕ್ರಮ. ಬೆಳಿಗ್ಗೆ 10.30 ರಿಂದ ಸಭಾ ಕಾರ್ಯಕ್ರಮ ನಡೆಯಲಿವೆ.

  1.  

ಎನ್. ರವಿರಾಜ್ ಶೆಟ್ಟಿ ನಿಟ್ಟೆಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಧಾರ್ಮಿಕ ಉಪನ್ಯಾಸವನ್ನು ಆರ್. ದಾಮೋದರ ಶರ್ಮಾ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಡಾ. ಮಂಜುನಾಥ ಭಂಡಾರಿ, ಮೆ। ಸೋಮಯಾಜಿ ಇನ್ಸಾಸ್ಪಕ್ಟರ್‌ ಪ್ರೈ. ಲಿಮಿಟೆಡ್‌ ನ ಬಿ. ರಘುನಾಥ ಸೋಮಯಾಜಿ, ಲೋಟಸ್ ಪ್ರಾಪರ್ಟಿಸ್ ಜಿತೇಂದ್ರ ಕೊಟ್ಟಾರಿ, ಪ್ರಶಾಂತ್ ಸನಿಲ್‌, ಮಹಾಬಲೇಶ್ವರ ಟಿ ಭಟ್, ಬೈದ್ಯಾವುಗುತ್ತು ಉಮೇಶ್ ಮಲ್ಲಿ, ರವಿರಾಜ್ ಶೆಟ್ಟಿ, ದಿವಾಕರ ನಾಯ್ಕ್ ಪಾಲ್ಗೊಳ್ಳಲಿದ್ದಾರೆ.

  1.  

Leave a Reply

Your email address will not be published. Required fields are marked *