Breaking News

21 ಮಂದಿ ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಮುಹಮ್ಮದ್‌ ರೋಶನ್‌ ಬೆಳಗಾವಿ ಡಿಸಿ

 

ಬೆಂಗಳೂರು: ರಾಜ್ಯ ಸರ್ಕಾರ 25 ಮಂದಿ ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯ ಬೆನ್ನಲ್ಲೆ ಈಗ 21 ಮಂದಿ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಎಲ್ಲ ಅಧಿಕಾರಿಗಳು ತತಕ್ಷಣವೇ ಕರ್ತವ್ಯಕ್ಕೆ ಹಾಜರ್‌ ಆಗುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶನ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಡಾ. ಕೆ.ವಿ. ರಾಜೇಂದ್ರ ಅವರನ್ನು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹೆಸ್ಕಾಂ ಎಂಡಿ ಆಗಿದ್ದ ಮುಹಮ್ಮದ್‌ ರೋಶನ್‌ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

  1.  

ಡಾ. ರಾಮ್‌ ಪ್ರಸಾದ್‌ ಮನೋಹರ್‌ ವಿ (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ), ನಿತೇಶ್‌ ಪಾಟೀಲ್‌ (ಎಂಎಸ್‌ಎಂಇ ನಿರ್ದೇಶಕ), ಡಾ. ಅರುಂಧತಿ ಚಂದ್ರಶೇಖರ್‌ (ಪಂಚಾಯತ್‌ ರಾಜ್‌ ಕಮಿಷನರ್‌), ಜ್ಯೋತಿ ಕೆ (ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕಿ), 5. ಶ್ರೀಧರ ಸಿ.ಎನ್‌ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ), ಡಾ. ರಾಜೇಂದ್ರ ಕೆ.ವಿ (ಪ್ರವಾಸೋದ್ಯಮ ಇಲಾಖೆ ನಿರ್ದೇಶಕ), ಚಂದ್ರಶೇಖರ ನಾಯಕ ಎಲ್. (ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ), ವಿಜಯಮಹಾಂತೇಶ್‌ ಬಿ. ದಾನಮ್ಮನವರ್‌ (ಹಾವೇರಿ ಜಿಲ್ಲಾಧಿಕಾರಿ), ಗೋವಿಂದ ರೆಡ್ಡಿ (ಗದಗ ಜಿಲ್ಲಾಧಿಕಾರಿ), ರಘುನಂದನ್‌ ಮೂರ್ತಿ (ಖಜಾನೆ ಆಯುಕ್ತ ಬೆಂಗಳೂರು), ಡಾ. ಗಂಗಾಧರಸ್ವಾಮಿ ಜಿ.ಎಂ (ದಾವಣಗೆರೆ ಜಿಲ್ಲಾಧಿಕಾರಿ), ಲಕ್ಷ್ಮೀಕಾಂತ ರೆಡ್ಡಿ (ಮೈಸೂರು ಜಿಲ್ಲಾಧಿಕಾರಿ), ನಿತೀಶ್‌ ಕೆ (ರಾಯಚೂರು ಜಿಲ್ಲಾಧಿಕಾರಿ), ಮುಹಮ್ಮದ್‌ ರೋಶನ್‌ (ಬೆಳಗಾವಿ ಜಿಲ್ಲಾಧಿಕಾರಿ), ಶಿಲ್ಪಾ ಶರ್ಮಾ (ಬೀದರ್‌ ಜಿಲ್ಲಾಧಿಕಾರಿ), ದಿಲೇಶ್‌ ಸಸಿ (ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು), ಲೋಖಂಡೆ ಸ್ನೇಹಲ್‌ ಸುಧಾಕರ್‌ (ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ), ಶ್ರೀರೂಪಾ (ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ),. ಜಿಟ್ಟೆ ಮಾಧವ ವಿಠಲ ರಾವ್ (ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌), ಹೇಮಂತ್‌ ಎನ್. (ಶಿವಮೊಗ್ಗ ಜಿ.ಪಂ ಸಿಇಒ),‌ ನಾಂಗ್‌ಜೈ ಮುಹಮ್ಮದ್‌ ಅಲಿ ಅಕ್ರಂ ಶಾ (ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ) ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com