Breaking News

ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ, 25 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

 

ಬೆಂಗಳೂರು: ರಾಜ್ಯ ಸರಕಾರವು ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿಗೆ ಮುಂದಾಗಿದ್ದು ಒಟ್ಟು 25 ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಎನ್‌. ಶಶಿಕುಮಾರ್‌ ಅವರು ಹುಬ್ಬಳ್ಳಿ- ಧಾರವಾಡ ನೂತನ ಕಮಿಷನರ್‌ ಆಗಿ ನೇಮಕವಾಗಿದ್ದಾರೆ.

  1.  

ಉತ್ತರ ಕನ್ನಡ ಜಿಲ್ಲೆಯ ಎಸ್‌ ಪಿಯಾಗಿ ನಾರಾಯಣ, ದಕ್ಷಿಣ ಕನ್ನಡಕ್ಕೆ ಯತೀಶ್‌ ಅವರನ್ನು ಎಸ್‌ ಪಿಯನ್ನಾಗಿ ನೇಮಕ ಮಾಡಿ ಸರಕಾರವು ಆದೇಶ ಹೊರಡಿಸಿದೆ.
ಹುಬ್ಬಳ್ಳಿ- ಧಾರವಾಡ ಕಮಿಷನರ್‌ ಆಗಿದ್ದ ರೇಣುಕಾ ಸುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಶೀಮಾ ಲಾಟ್ಕರ್‌ ಅವರನ್ನು ಮೈಸೂರು ಪೊಲೀಸ್‌ ಕಮಿಷನರ್‌ ಆಗಿ ನೇಮಕ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಎಸ್‌ ಪಿ ವಿಷ್ಣುವರ್ಧನ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com