ಅಂಕೋಲಾ: ಮಹಿಳೆಯೊಬ್ಬರು ರೈಲ್ವೆ ಹಳಿ ದಾಟುವಾಗ ಆಕಸ್ಮಿಕವಾಗಿ ರೈಲು ಬಡಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಗೋಕರ್ಣ ಪೊಲೀಸ್ ಠಾಣೆಯ ವ್ಯಾಪ್ತಿಯ ಮೊರಬಾ ಗ್ರಾಮದಲ್ಲಿ ನಡೆದಿದೆ.
ಮೊರಬಾ ಕುಮಟಾ ನಿವಾಸಿ ಸುಶೀಲಾ ಚಂದ್ರು ಹರಿಕಂತ್ರ (65) ಮೃತ ಮಹಿಳೆ. ಮಹಿಳೆಗೆ ಕಿವಿ ಸಮಸ್ಯೆ ಇದ್ದರಿಂದ ಕೇಳಿಸದೇ ಇರುವುದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸುಶೀಲಾ ಅವರು ಮೊರಬಾದ ತಮ್ಮ ಮನೆಯಿಂದ ತಮ್ಮನ ಮನೆಗೆ ಹೋಗಲು ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.