ಯಲ್ಲಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಿರವತ್ತಿ ಚೆಕ್ ಪೋಸ್ಟ್ ನಲ್ಲಿ ಗುರುವಾರ ಮಹಾರಾಷ್ಟ್ರ ನೋಂದಣಿಯ ವಾಹನ ತಪಾಸಣೆ ಮಾಡಿದಾಗ ದಾಖಲೆ ಇಲ್ಲದೇ ಇರುವು 1. 20 ಲಕ್ಷ ರೂಪಾಯಿ ಮೊತ್ತವನ್ನು ವಶಕ್ಕೆ ಪಪಡೆಯಲಾಗಿದೆ.
ವಿಶ್ವನಾಥ ಲೊಕ್ಕಯ್ಯ ಶೆಟ್ಟಿ ಎಂಬುವವರ ವಾಹನದಲ್ಲಿ ಹಣ ಸಾಗಣೆ ಮಾಡಲಾಗುತ್ತಿತ್ತು. ಪುಣೆಯಿಂದ ಉಡುಪಿಗೆ ಹೊರಟ್ಟಿದ್ದ ವಾಹನವನ್ನು ಕರ್ತವ್ಯ ನಿರತ ಎಸ್.ಎಸ್.ಟಿ ತಂಡ ಮತ್ತು ಪೊಲೀಸ್ ಸಿಬ್ಬಂದಿ ತಪಾಸಣೆ ಮಾಡಿದ ವೇಳೆ ಯಾವುದೇ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಅಧಿಕೃತ ದಾಖಲೆಗಳು ಇಲ್ಲದೇ ಇರುವುದರಿಂದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಯಲ್ಲಾಪುರ ಉಪ ಖಜಾನೆಯಲ್ಲಿ ಹಣವನ್ನು ಇಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ್ ತಿಳಿಸಿದ್ದಾರೆ.