ಸಿರಸಿ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರದಿಂದ ಪೊಕ್ಸೋ ಪ್ರಕರಣ ದಾಖಲು ಮಾಡಿರುವುದನ್ನು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಂತ ಮೂರ್ತಿ ಹೆಗಡೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಖಂಡಿಸಿದ್ದಾರೆ.
ಯಡಿಯೂರಪ್ಪ ಅವರ ವಿರುದ್ಧ ಈ ಪ್ರಕರಣ ದಾಖಲು ಮಾಡಿರುವುದನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ನಾಡಿನ ಜನರ ಒಳಿತಿಗಾಗಿ ದುಡಿದ ಉತ್ಸದಿ ರಾಜಕಾರಣಿಯ ಮೇಲೆ ಈ ರೀತಿ ಪ್ರಕರಣ ದಾಖಲಿಸುವುದು ಸರಿಯಾದ ನಡೆಯಲ್ಲ. ಇದನ್ನು ನಾವು ಖಂಡಿಸಲೇ ಬೇಕು. ದುರಾಸೆಗಳಿಗಾಗಿ ಹಲವು ಜನರ ವಿರುದರ್ಧ ಪ್ರಕರಣ ದಾಖಲಿಸಿರುವವ ಮಾನಸಿಕತೆ ಪರೀಕ್ಷೆ ಮಾಡಬೇಕು. ಒಬ್ಬ ಜನಸೇವಕ ದಶಕಗಳ ಕಾಲ ಜನರಿಗಾಗಿ ದುಡಿದು ಸಾಧಿಸಿದ ಹೆಸರು ಕೀರ್ತಿಯನ್ನು ಇಂತಹ ಒಂದು ಸಣ್ಣ ತುಚ್ಯ ಆರೋಪದಿಂದ ಹಾಳು ಮಾಡುವ ಷಡ್ಯಂತ್ರ ಇದರಲ್ಲಿ ಅಡಗಿದೆ. ಒಬ್ಬ ಮಹಾ ನಾಯಕನ ತೇಜೋವಧೆ ಮಾಡುವುದನ್ನು ಖಂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಬ್ಬ ಹೆಣ್ಣು ಮಕ್ಕಳ ತಂದೆ ಆಗಿರುವ ಯಡಿಯೂರಪ್ಪ ಅವರಿಂದ ಈ ರೀತಿಯ ಘಟನೆ ನಡೆಯಲು ಎಂದಿಗೂ ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ನಮ್ಮದು. ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಅವರ ಚರಿತ್ರೆ ಹರಣ ಮಾಡಲು ಯಾರೇ ಪ್ರಯತ್ನಿಸಿದರೂ ಅದೊಂದು ಅಕ್ಷಮ್ಯ ಅಪರಾಧ ಎಂದು ತಿಳಿಸಿದ್ದಾರೆ.