Breaking News

ಜಿಲ್ಲಾಡಳಿತದಿಂದ ಶ್ರದ್ದಾ ಭಕ್ತಿಯ ಮಹಾ ಶಿವರಾತ್ರಿ ಆಚರಣೆ: ಡಿಸಿ ಮಾನಕರ

 

ಕಾರವಾರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾರ್ಚ್ 8 ರಂದು ನಡೆವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತಿ ಭಾವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಮಾ. 8 ರಂದು ರಾತ್ರಿ 8 ಗಂಟೆಯಿಂದ ಮರು ದಿನ ಬೆಳಿಗ್ಗೆ 5 ಗಂಟೆಯವರೆಗೆ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ
ಮುರುಡೇಶ್ವರದ ಕಡಲಕಿನಾರೆ ಬಳಿ, ರಾಜ್ಯದ ವಿವಿಧ ಭಾಗಗಳಿಂದ ಬರುವ ಕಲಾವಿದರಿಂದ ಶಿವನಿಗೆ ಸಂಬಂಧಿಸಿದ ವಿವಿಧ ಭಕ್ತಿಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಭರತ ನಾಟ್ಯ, ಕಥಕ್ಕಳಿ, ಒಡಿಸಾ ನೃತ್ಯಗಾರರು ಆಗಮಿಸಲಿದ್ದು, ಶಿವ ತಾಂಡವ, ಶಿವ ಪುರಾಣ, ಶಿವಲೀಲೆ ನೃತ್ಯ ಕಾರ್ಯಕ್ರಮಗಳು ಹಾಗೂ ಶಿವನಿಗೆ ಸಂಬಂಧಿಸಿದ ಭಕ್ತಿ ಗೀತೆಗಳು ಹಾಗೂ ವಾದ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.

  1.  

ಮಾ. 8 ರಂದು ನಡೆವ ಈ ಅಭೂತಪೂರ್ವ ಭಕ್ತಿ ಪೂರ್ವಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಮಹಾಶಿವರಾತ್ರಿಯ ಜಾಗರಣೆಯ ಅರ್ಥಪೂರ್ಣವಾದ ಈ ಭಕ್ತಿ ಭಾವದಲ್ಲಿ ಪರಶಿವನ ಧ್ಯಾನದಲ್ಲಿ ತಲ್ಲಿನರಾಗುವಂತೆ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಚಿಸುವ ಕಲಾವಿದರು ಮತ್ತುಕಲಾ ತಂಡಗಳು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಅವರ ಮೊ.ಸಂ. 85536- 29978 ರಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com