Breaking News

ಮಂಗಳೂರು: ಕೆಐಒಸಿಎಲ್‌ ಉದ್ಯೋಗಿ ಬೈಕ್‌ ಗೆ ಕಾರು ಡಿಕ್ಕಿ, ಸಾವು, ಪ್ರಕರಣ ದಾಖಲು

 

ಸುರತ್ಕಲ್‌: ಕಾವೂರು ಜಂಕ್ಷನ್‌ನ ಕೆಐಒಸಿಎಲ್‌ ಕ್ವಾಟ್ರಸ್‌ ನ ಮುಖ್ಯಗೇಟ್‌ ಎದುರು ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಕೆಐಒಸಿಎಲ್‌ ಉದ್ಯೋಗಿ ಶೇಖರಪ್ಪ (54) ಮೃತಪಟ್ಟಿದ್ದಾರೆ.

  1.  

ಶೇಖರಪ್ಪ ಅವರು ಕರ್ತವ್ಯ ಮುಗಿಸಿ ಕ್ವಾಟ್ರಸ್‌ ಕಡೆಗೆ ಬರಲು ಮುಖ್ಯಗೇಟ್‌ ಎದುರು ಇರುವ ಡಿವೈಡರ್‌ ಬಳಿ ಬಲಕ್ಕೆ ತಿರುಗಲು ಇಂಡಿಕೇಟರ್‌ ಹಾಕಿ ನಿಂತಿದ್ದ ವೇಳೆ ಕಾರು ಡಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಶೇಖರಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ನಡುವೆಯೇ ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com