ಬ್ರಹ್ಮಾವರ: ಸಾಲ ವಾಪಸ್ ಕೇಳಿದಕ್ಕೆ ತಂದೆ ಹಾಗೂ ಮಗನಿಗೆ ಹಲ್ಲೆ ನಡೆಸಿರುವ ಘಟನೆ ಇದೇ 26 ರಂದು ಬಾರಕೂರು ನಾಯರ್ ಪೆಟ್ರೋಲ್ ಬಂಕ್ ಎದುರು ನಡೆದಿದೆ.
ಹಲ್ಲೆಗೊಳಗಾದವರನ್ನು ಬಾರಕೂರಿನ ಮುಹಮ್ಮದ್ ಮುಫೀಝ್ (19) ಹಾಗೂ ಅವರ ತಂದೆ ಫಕೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಮುಫೀಝ್ ತಮ್ಮ ತಂದೆ ಜತೆ ಇದ್ದಾಗ ಪರಿಚಯದ ಪ್ರಮೋದ್ ಅವರನ್ನು ನೋಡಿ ಸಾಲದ ಹಣ ವಾಪಸ್ ಕೇಳಿದ್ದರು ಎನ್ನಲಾಗಿದೆ.
ಇದರಿಂದ ಕೋಪಗೊಂಡು ಅವಾಚ್ಯವಾಗಿ ಬೈದು ಮುಫೀಝ್ಗೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ಅವರ ತಂದೆಗೆ ಅಲ್ಲೇ ಇದ್ದ ರಿಕ್ಷಾ ಚಾಲಕ ಹಲ್ಲೆ ನಡೆಸಿದನು. ಬಳಿಕ ಅವರಿಬ್ಬರು ರಿಕ್ಷಾದಲ್ಲಿ ಅಲ್ಲಿಂದ ಪರಾರಿಯಾದರೆಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.