ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಕೋಟೆಗಲ್ಲಿಯ ಸೌದಾಗರ್ ರಸ್ತೆಯಲ್ಲಿನ ಆಯಿಲ್ ಮಿಶ್ರಿತ ಬಾವಿ ನೀರನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಬಾವಿಯಲ್ಲಿ ಏಕಾಎಕಿ ಸ್ಫೋಟಗೊಂಡ ಪರಿಣಾಮ ಬಾವಿ ಸ್ವಚ್ಛ ಮಾಡುತ್ತಿದ್ದ ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ.
ಗಾಯಗೊಂಡಿರುವ ಕಾರ್ಮಿರನ್ನು ರವಿ, ವಿನಾಯಕ ಹಾಗೂ ಜಗದೀಶ ಎಂದು ತಿಳಿದು ಬಂದಿದೆ. ಬೆಂಕಿಯ ತೀವ್ರವತೆಯಿಂದ ವಿನಾಯಕ ಅವರ ಸ್ಥಿತಿ ಗಂಭೀರವಾಗಿದೆ. ಬಾವಿಯ ಮೇಲಿಂದ ಇಣುಕಿ ನೋಡುತ್ತಿದ್ದ ವೇಳೆ ಬೆಂಕಿಯ ತೀವ್ರತೆಗೆ ಗಾಯಗಳಾಗಿವೆ.