ಉಡುಪಿ: ಭಾರತೀಯ ಸ್ಟೇಟ್ ಬ್ಯಾಂಕ್ ಖಜಾನೆ ಶಾಖೆಯಲ್ಲಿ ನಿವೃತ್ತಿ ವೇತನ ಪಡೆವ ನಿವೃತ್ತರ ಮಿಲನ ಕಾರ್ಯಕ್ರಮವು ನಡೆಯಿತು.
ಬ್ಯಾಂಕ್ ನಿಂದ ನಿವೃತ್ತಿ ವೇತನ ಪಡೆಯುವವರ ಖಾತೆಗೆ ತಡೆ ಇಲ್ಲದೆ ವೇತನ ಜಮೆ ಆಗಲು 80, ಅದಕ್ಕಿಂತ ಹೆಚ್ಚಿನ ಪ್ರಾಯದವರು ಅಕ್ಟೋಬರ್ ತಿಂಗಳು ಹಾಗೂ ಉಳಿದವರು ನವೆಂಬರ್ ತಿಂಗಳ ಅಂತ್ಯದೊಳಗೆ ಜೀವಿತ ಪ್ರಮಾಣಿ ಪತ್ರ ಸಲ್ಲಿಸಲೇಬೇಕು. ಉಳಿತಾಯ ಮತ್ತು ಅಳವಡಿಸಿಕೊಂಡ ಇನ್ನಿತರ ಆರ್ಥಿಕ ವ್ಯವಹಾರದ ಖಾತೆಗೆ ಸಕಾಲದಲ್ಲಿ ನಾಮನಿರ್ದೇಶನ ಮಾಡಬೇಕು ಎಂದು ಪ್ರಾಂತೀಯ ಕಚೇರಿ ಮುಖ್ಯ ಪ್ರಬಂಧಕ ಅಶ್ವಿನಿ ಕುಮಾರ್ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಖಾ ಪ್ರಬಂಧಕ ಎನ್. ಸಂದೀಪ್ ಶೆಣೈ ಅವರು ಮಾತನಾಡಿ, ವಯೋ ಸಹಜ ಸಮಸ್ಯೆಯ ಹಿರಿಯ ನಾಗರಿಕರಾದ ನಿವೃತ್ತರು, ಬ್ಯಾಂಕ್ ಗೆ ಬಂದಾಗ ಸರಳವಾಗಿ ಸೌಲಭ್ಯ ಒದಗಿಸಲಾಗುವುದು ಎಂದರು.
ಬ್ಯಾಂಕ್ ನ ಸಹವರ್ತಿ ಕೃಷ್ಣ ಪೂಜಾರಿ, ನಿವೃತ್ತ ನೌಕರರ ಸಂಘದ ಮಾಜಿ ಪದಾಧಿಕಾರಿ ಶ್ರೀನಿವಾಸ ಶೆಟ್ಟಿ ತೋನ್ಸೆ ಮಾತನಾಡಿದರು. ಹಿರಿಯ ಸಹವರ್ತಿ ಸುಶ್ಮಾ ಶೆಟ್ಟಿ ಸ್ವಾಗತಿಸಿದರು.