Breaking News

ಜೀವವಿಮಾ ಪ್ರತಿನಿಧಿಗಳ ಫೆಡರೇಷನ್ ವಿಭಾಗೀಯ ಕೌನ್ಸಿಲ್ ವಾರ್ಷಿಕ ಮಹಾಸಭೆ

 

ಮಂಗಳೂರು:  ಲಿಯಾಫಿ (ಲೈಫ್ ಇನ್ಸೂರೆನ್ಸ್ ಎಜೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಉಡುಪಿ ವಿಭಾಗೀಯ ಕೌನ್ಸಿಲ್ ನ ವಾರ್ಷಿಕ ಮಹಾ ಸಭೆ ಮಂಗಳೂರಿನಲ್ಲಿ ಕೆ. ಮಾಧವ ಶೆಣೈ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಲಿಯಾಫಿ ದಕ್ಷಿಣ ಕೇಂದ್ರ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೀಲಾವತಿ ಕೆ, ಲಿಯಾಫಿ ದಕ್ಷಿಣ ಕೇಂದ್ರ ವಲಯ ಸಮಿತಿ ಸಹ ಕಾರ್ಯದರ್ಶಿ ಮುರಳೀಧರ್ ಡಿ ವಿ, ಲಿಯಾಫಿ ಉಡುಪಿ ವಿಭಾಗೀಯ ಕೌನ್ಸಿಲ್ ನ ಅಧ್ಯಕ್ಷೆ ವಂದನಾ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಎಚ್ ಸುಬ್ರಹ್ಮಣ್ಯ ಭಟ್, ಖಜಾಂಜಿ ಶಾಂತಾ ಜಯಕರ್,  ಮಂಗಳೂರು ಜೀವವಿಮಾ ಪ್ರತಿನಿಧಿಗಳ ವೇದಿಕೆಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಭಾರತೀಯ ಜೀವ ವಿಮಾ ನಿಗಮದ ಕೊಪ್ಪ, ಮೂಡಿಗೆರೆ, ಚಿಕ್ಕ ಮಗಳೂರು, ಉಡುಪಿ ಮುಖ್ಯ ಶಾಖೆ ಮತ್ತು ಮಂಗಳೂರು 2 ನೇ ಶಾಖೆ ಲಿಯಾಫಿ ಶಾಖಾ ಸಮಿತಿ ಪದಾಧಿಕಾರಿಗಳು ಇದ್ದರು.

  1.  

ಮಹಾಸಭೆಯಲ್ಲಿ ಮುಂದಿನ ಎರಡು ಆರ್ಥಿಕ ವರ್ಷಗಳಿಗೆ ನಡೆದ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಎ ವಿಶ್ವನಾಥ ಗಟ್ಟಿ(ಮಂಗಳೂರು 2ನೇ ಶಾಖೆ) ಅವರು ನೂತನ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಎಚ್ ಸುಬ್ರಹ್ಮಣ್ಯ ಭಟ್ (ಮಂಗಳೂರು 2ನೇ ಶಾಖೆ ) ಉಪಾಧ್ಯಕ್ಷರಾಗಿ ಸಿದ್ದಪ್ಪ ಗೌಡ (ಕೊಪ್ಪ ಶಾಖೆ) ಗಿರೀಶ್ ಸಿ. ಎಂ (ಚಿಕ್ಕಮಗಳೂರು ಶಾಖೆ ) ರಮೇಶ್ ಆಚಾರ್ (ಉಡುಪಿ ಮುಖ್ಯ ಶಾಖೆ) ಜತೆ ಕಾರ್ಯದರ್ಶಿ ಕಾಳು ಕುಲಾಲ್ (ಉಡುಪಿ  ಮುಖ್ಯ ಶಾಖೆ )  ಬಿ. ಎಸ್. ಸಂತೋಷ್ (ಮೂಡಿಗೆರೆ ಶಾಖೆ ) ಖಜಾಂಚಿ ಆಗಿ ಶಾಂತಾ ಜಯಕರ್ (ಉಡುಪಿ ಸಿಎಬಿ) ಸಂಘಟನಾ ಕಾರ್ಯದರ್ಶಿ ಗಣೇಶ್ ಮೇಸ್ತ (ಉಡುಪಿ ಮುಖ್ಯ ಶಾಖೆ ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾಶೀನಾಥ್ ಪುತ್ರನ್ (ಮಂಗಳೂರು 2ನೇ ಶಾಖೆ) ಅವಿರೋಧವಾಗಿ ಆಯ್ಕೆಯಾದರು.

ಶಾಂತಾ ಜಯಕರ್ ಸ್ವಾಗತಿಸಿದರು. ಮಹಾಲಿಂಗೇಶ್ವರ ಭಟ್ ಬಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವೇದಿಕೆ ಕಾರ್ಯದರ್ಶಿ ರಾಮ ಅಮೀನ್ ಪಚ್ಚನಾಡಿ ವಂದಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com