Breaking News

ಸ್ಟೇರಿಂಗ್‌ ಎಕ್ಸಲ್ ತುಂಡಾಗಿ ನಿಯಂತ್ರಣ ತಪ್ಪಿದ ಬಸ್:‌ ಹಲವರಗೆ ಗಾಯ

 

ಸಿರಸಿ: ಬೆಳಗಾವಿಯಿಂದ ಸಿರಸಿಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ನ  ಸ್ಟೇರಿಂಗ್‌ ಎಕ್ಸಲ್ ತುಂಡಾಗಿ ನಿಯಂತ್ರಣ ಕಳೆದುಕೊಂಡು ದಾಸನಗದ್ದೆ‌ ಸಮೀಪದ ಧರಗೆ ಡಿಕ್ಕಿ ಹೊಡೆದಿದೆ.

  1.  

ಬಸ್ ನಲ್ಲಿದ್ದ 8 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತ ಸಂಬವಿಸಿ ಒಂದು ಗಂಟೆಯಾದರೂ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಿಂದ ಯಾವುದೇ ಅಧಿಕಾರಿ ಸ್ಥಳಕ್ಕೆ ಬಾರದೇ ಇರುವುದರ ವಿರುದ್ಧ ಬಸ್ ನಲ್ಲಿದ್ದ ಪ್ರಯಾಣಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಬಸ್ ಸಿರಸಿಗೆ ಬಂದು ಮತ್ತೆ ಮಧ್ಯಾಹ್ನ 12 ಗಂಟಗೆ ಬೆಳಗಾವಿಗೆ ಹೋಗಬೇಕಿತ್ತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com