Breaking News

ಮಂಗಳೂರು: ವ್ಯಾಪಕ ಮಳೆಗೆ ಬುಡಮೇಲಾಗಿ ಬಿತ್ತು ಮರ, ತಪ್ಪಿದ ಅಪಾಯ

 

ಮಂಗಳೂರು: ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಲೇಡಿಹಿಲ್‌ ಸರ್ಕಲ್‌ ಬಸ್‌ ನಿಲ್ದಾಣದ ಸಮೀಪ ಇರುವ ದೊಡ್ಡ ಮರವು ಬುಡ ಸಮೇತ ನೆಲಕ್ಕುರುಳಿವ ಘಟನೆ ನಡೆದಿದೆ. ರಾತ್ರಿ ವೇಳೆ ಆಗಿದ್ದರಿಂದ ಜನದಟ್ಟಣೆ ಕಡಿಮೆ ಇದ್ದುದ್ದರಿಂದ ಬಾರಿ ಅನಾಹುತ ತಪ್ಪಿದಂತೆ ಆಗಿದೆ.

  1.  

ಮರ ನೆಲಕ್ಕೆ ಉರುಳಿ ಬೀಳುವಾಗ ಸ್ಕೂಟರ್ ಸವಾರರಿಬ್ಬರು ಇದೇ ದಾರಿಯಲ್ಲಿ ಹೋಗುತ್ತಿದ್ದು, ಬಾರಿ ಅನಾಹುತವೊಂದು ತಪ್ಪಿದೆ.

ಮರವು ಬುಡಮೇಲಾಗಿ ಬಿದ್ದ ಪರಿಣಾಮ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿವೆ. ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಮರ ಬಿದ್ದ ಕಡೆಗೆ ವಾಹಮ ಸಂಚಾರ ನಿಷೇಧ ಮಾಡಲಾಗಿದೆ. ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com