ಹೊನ್ನಾವರ: ಇಲ್ಲಿನ ರಾಮತೀರ್ಥ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಪವಾಡ ಸದೃಶ ರೂಪದಲ್ಲಿ ಬೈಕ್ ಸವಾರ ಹಾಗೂ ಸಹ ಸವಾರ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ.
ರಸ್ತೆ ಕ್ರಾಸ್ ಮಾಡುವಾಗ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರು ಬೈಕ್ ನಿಂದ ಹಾರಿದ್ದಾರೆ ಪರಿಣಾಮ ಇಬ್ಬರ ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಇಬ್ಬರಿಗೂ ಸಣ್ಣ ಗಾಯಗಳಾಗಿವೆ, ಬಸ್ ಅಡಿಯಲ್ಲಿ ಬೈಕ್ ಸಿಕ್ಕು ಹಾಕಿಕೊಂಡು ನಜ್ಜುಗುಜ್ಜಾಗಿದೆ. ಬೈಕ್ ಸವಾರ ಸಂದೇಶ ಎಂದು ತಿಳಿದು ಬಂದಿದೆ. ಇವರು ಎಲ್ ಐ ಸಿ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.