Breaking News

ಸಾನಿಧ್ಯದಲ್ಲಿ ಸಾಮರ್ಥ್ಯ ವಿಶೇಷ ಶಿಕ್ಷಕರ ತರಬೇತಿ: ಡಾ. ವಸಂತ ಶೆಟ್ಟಿ

 

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ, ವಿಶೇಷ ಶಿಕ್ಷಣ ತರಬೇತಿಯಲ್ಲಿ ಕಾಲಕಾಲಕ್ಕೆ ಆಗುತ್ತಿರುವ ವಿಶೇಷ ಬದಲಾವಣೆ ಕುರಿತು ಅರಿವು ಮೂಡಿಸಲು ಹಾಗೂ ಈ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ಹಾಗೂ ಸ್ಥಾಪಕ ಡಾ. ವಸಂತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  1.  

ಬೆಂಗಳೂರಿನ ಈಶಾನ್ಯ ಇಂಡಿಯಾ ಫೌಂಡೇಶನ್ ಇದೇ 20, 21 ರಂದು ತರಬೇತಿ ಶಿಬಿರವನ್ನು ಮಂಗಳೂರಿನ ಶಕ್ತಿ ನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಹಮ್ಮಿಕೊಂಡಿದೆ. 2 ಜಿಲ್ಲೆಗಳಿಂದ 50 ಮಂದಿ ವಿಶೇಷ ಶಿಕ್ಷಕರು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. 20 ರಂದು ಬೆಳಿಗ್ಗೆ 10  ಗಂಟೆಗೆ ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಪಿ. ಎಲ್. ಅವರು ಈ ಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com