ಬೆಂಗಳೂರು: ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆಮಾಕ್ರೆಟಿಕ್ ಇನ್ ಕ್ಲೂಸಿವ್ ಅಲೆಯನ್ಸ್) ಎಂದು ನಾಮಕರಣ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.
ಸಿಬಿಐ, ಈಡಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ವಿಪಕ್ಷ ನಾಯಕರ ವಿರುದ್ಧ ಬಳಸುತ್ತಿದ್ದಾರೆ. ನಮಗೆ ದೇಶ ಮುಖ್ಯ, ನಮ್ಮಲ್ಲಿ ಪ್ರಾದೇಶಿಕವಾಗಿ ಹಲವು ರಾಜಕೀಯ ವಿರೋಧ ಇರಬಹುದು, ಆದರೆ, ದೇಶದ ಹಿತಾಶಕ್ತಿಗಾಗಿ ಒಂದಾಗುತ್ತಿದ್ದೇವೆ ಎಂದು ತಿಳಿಸಿದರು.
ದೇಶದ ಜನರ ಹಿತಾಸಕ್ತಿ, ಪ್ರಜಾಪ್ರಭುತ್ವ ರಕ್ಷಣೆಗೆ ಇದು ಪ್ರಮುಖ ಸಭೆ, ನಾವು ನಮ್ಮೊಳಗೆ ವೈರುದ್ಯಗಳಿದ್ದರೂ ಜನರ ಒಂದೇ ಧ್ವನಿಯಾಗಿ ನಾವು ಹೊರ ಹೊಮ್ಮುತ್ತೇವೆ.ನಮ್ಮ ಮೈತ್ರಿಕೂಟದ ಹೆಸರಿನಲ್ಲಿ ಆಳವಾದ ಅರ್ಥವಿದೆ. ಇದು ದೇಶದ ಒಳಿತಿಗಾಗಿ ಅಗತ್ಯವಿದೆ ಎಂದು ಅವರು ಹೇಳಿದರು.