Breaking News

ಐಎಂಯು ಸಿಇಟಿ, ಕೆಇಎಎಂ ಫಲಿತಾಂಶ: ಶಾರದಾ ವಿದ್ಯಾನಿಕೇತನ ಕಾಲೇಜು ಸಾಧನೆ

 

ಮಂಗಳೂರು: ತಲಪಾಡಿಯ ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ಇಂಡಿಯನ್ ಮೆರಿಟೈಮ್ ಯೂನಿವರ್ಸಿಟಿ ಕಾಮನ್ ಎಂಟ್ರೆನ್ಸ್ ಟೆಸ್ಟ್ (ಐಎಂಯು ಸಿಇಟಿ) ನಲ್ಲಿ ಈ ಅಖಿಲ ಭಾರತ ಮಟ್ಟದ ರ‍್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ವಿನಾಯಕ ತಿಳಿಸಿದ್ದಾರೆ.

  1.  

ಆದರ್ಶ್ ಕೆ – ಎಐಆರ್, 968, ರಾಕೇಶ್ ರಾಮ್ – ಎಐಆರ್ – 1573, ಗಗನ್ ವಿ. – ಎಐಆರ್ – 4718, ಶ್ರೇಯಸ್ ಜೆ.ಎಸ್ – ಎಐಆರ್ – 8731 ಉತ್ತಮ ಫಲಿತಾಂಶ ದಾಖಲು ಮಾಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕೆಇಎಎಂ ನಲ್ಲಿ ರಾಜ್ಯ ಮಟ್ಟದ ರ‍್ಯಾಂಕ್ ಗಳಿಸಿದ್ದಾರೆ. ಏಇಂಒ ಕೇರಳ ರಾಜ್ಯದ ವಿವಿಧ ವೃತ್ತಿಪರ ಪದವಿ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಸರಣಿ ಆಗಿದೆ. ಇಶಿತಾ ವಿ. ಆರ್ 402 ರ‍್ಯಾಂಕ್ ಹಾಗೂ ಜೀವಾ ಕೆ.ವಿ 729 ರ‍್ಯಾಂಕ್ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ  ಡಾ.ಎಂ.ಬಿ.ಪುರಾಣಿಕ್ ಮತ್ತು ಶಾರದಾ ವಿದ್ಯಾನಿಕೇತನ ಬಳಗ, ಪ್ರಾಧ್ಯಾಪಕರು, ಸಿಬ್ಬಂದಿ  ಅಭಿನಂದಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com