ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ವರ್ಷದ ಸಂಭ್ರಮಾಚರಣೆ ಸಮಾಜ ಮಂದಿರ ಧರ್ಮನಗರ-ಕಂಬಳಬೆಟ್ಟು ಇಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮಿತಾ ತಾರಾನಾಥ್ ಬೋಳಿಗದ್ದೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೀ ಕನ್ನಡ ಕಾಮಿಡಿ ಕಿಲಾಡಿಗಳ ಖ್ಯಾತಿಯ ಅನೀಶ್ ಪೂಜಾರಿ ವೇಣೂರು, ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ, ಹಾಡುಗಾರರು ಮತ್ತು ನಿರೂಪಕ ರಕ್ಷಣ್ ಮಡೂರು ಮತ್ತು ಸಂತೋಷ್ ಬೆಂಕ್ಯ, ರಂಗಭೂಮಿ ಕಲಾವಿದ ಮನೀಶ್ ಶೆಟ್ಟಿ ಸಿದ್ಧಕಟ್ಟೆ ಭಾಗವಹಿಸಿ ತಂಡಕ್ಕೆ ಶುಭಾ ಹಾರೈಸಿದರು.
ಲಕ್ಕಿಡಿಪ್ ಅದೃಷ್ಟವಂತರ ಆಯ್ಕೆ ನಡೆಯಿತು. ಕಾರ್ಯಕ್ರಮದಲ್ಲಿ ಸಾನ್ವಿ ಕನ್ಸ್ಟ್ರಕ್ಷನ್ ಮಾಲೀಕ ತಾರನಾಥ್ ಬೋಳಿಗದ್ದೆ ಅವರನ್ನು ಸನ್ಮಾನಿಸಲಾಯಿತು.
ಕಲಾಯಶಸ್ವಿ-2 ನಾಮಾಂಕಿತ ವಿವಿಧ ಆನ್ ಲೈನ್ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ಸಂಭ್ರಮಾಚರಣೆ ಪ್ರಯುಕ್ತ ನಡೆಸಿದ ಅದೃಷ್ಟ ಚೀಟಿ ಫಲಿತಾಂಶ ಪ್ರಕಟವಾಯಿತು.