ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರವಾರಕ್ಕೆ ಮೊದಲ ಬಾರಿಗೆ ಬಂದಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಜನಶಕ್ತಿ ವೇದಿಕೆ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು.
ಕಾರವಾರದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಇಬ್ಬರೂ ನಾಯಕರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಮಾಲೆ ಹಾಕಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಜತೆಗೆ ಸಸಿಗಳನ್ನ ನೀಡಿ ಪರಿಸರದ ಕಾಳಜಿ ಮೆರೆಯಲಾಯಿತು.
ಸಚಿವ ಮಂಕಾಳ ವೈದ್ಯ ಅವರು ಬಹಳ ಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದು, ಸಚಿವರಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿರುವುದು ಜಿಲ್ಲೆಯ ಹೆಮ್ಮೆ. ಅವರ ಅವಧಿಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ ಎಲ್ಲಾ ಶಾಸಕರ ಸಹಕಾರದಿಂದ ಬಡವರ, ದೀನ- ದಲಿತಪರ ಆಡಳಿತ ನಡೆದು, ಜಿಲ್ಲೆ ಸಮಗ್ರ ಅಭಿವೃದ್ಧಿ ಹೊಂದಲಿ. ಜಿಲ್ಲೆಯ ಸಮಸ್ಯೆಗಳನ್ನ ನಿವಾರಿಸುವಲ್ಲಿ ಶ್ರಮ ವಹಿಸುವಂತೆ ಈ ಮೂಲಕ ಕಾರ್ಯಕರ್ತರು ಇಬ್ಬರು ಮುಖಂಡರಲ್ಲಿ ಮನವಿ ಮಾಡಿದರು.
ಡಿ.ಕೆ. ನಾಯ್ಕ, ರಾಮಾ ನಾಯ್ಕ, ಬಾಬು ಶೇಖ್, ಅಜಯ್ ಸಿಗ್ಲಿ, ಶ್ವೇತಾ ನಾಯ್ಕ, ಕಾಶೀನಾಥ ನಾಯ್ಕ, ಚಂದ್ರಕಾಂತ ನಾಯ್ಕ, ಅಲ್ತಾಫ್ ಶೇಖ್, ಸೂರಜ್ ಕುರುಮಕರ್, ಚಂದ್ರಕಾಂತ ನಾಯ್ಕ, ನಗರಸಭೆ ಸದಸ್ಯ ಗುರುನಾಥ ಉಳ್ವೇಕರ್, ರಾಜು ತಾಂಡೇಲ್, ಅಜಯ್ ಸಿಗ್ಲಿ, ಅಶೋಕ ನಾಯ್ಕ, ಪ್ರಭಾಕರ ಮಾಳ್ಸೇಕರ್ ಇದ್ದರು.