Breaking News

ಶಾಂಗ್ರಿಲಾ ಹೊಟೇಲ್ ಎದುರು ಡಿಕೆಸಿ, ಸಿದ್ದು ಬೆಂಬಲಿಗರ ಹೈಡ್ರಾಮಾ

 

ಬೆಂಗಳೂರು: ಇಲ್ಲಿನ ಶಾಂತಿ ನಗರದಲ್ಲಿ ಇರುವ ಶಾಂಗ್ರಿಲಾ  ಹೋಟೆಲ್ ನಲ್ಲಿ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯುತ್ತಿದ್ದು, ಹೊರಗಡೆ ಡಿಕೆಶಿ-ಸಿದ್ದರಾಮಯ್ಯ ಬೆಂಬಲಿಗರು ಗಲಾಟೆ ನಡೆಸುತ್ತಿದ್ದು, ಇಬ್ಬರ ಬೆಂಬಲಿಗರು ತಮ್ಮ ತಮ್ಮ ನಾಯಕರುಗಳು ಸಿಎಂ ಆಗಬೇಕು ಎಂದು ಘೋಷಣೆ ಕೂಗುತ್ತಿದ್ದು, ಹೈಡ್ರಾಮಾ ನಡೆಸುತ್ತಿದ್ದಾರೆ.

  1.  

ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯ ಫೋಟೋ ಹಿಡಿದುಕೊಂಡು ಸಿದ್ದು ಸಿಎಂ ಎಂದರೆ, ಇತ್ತ ಡಿಕೆಶಿ ಬೆಂಬಲಿಗರು ಅವರ ಫೋಟೋ ಹಿಡಿದು ಡಿಕೆಶಿ ಸಿಎಂ ಅಂತ ಕೂಗುತ್ತಿದ್ದಾರೆ.

ಇದೀಗ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ಮೂವರು ನಾಯಕರನ್ನು ಕಳುಹಿಸಿಕೊಟ್ಟಿದ್ದು, ಇವರು ಸಭೆಯ ನಿರ್ಧಾರವನ್ನು ಹೈಕಮಾಂಡ್‌ಗೆ ನೀಡಲಿದ್ದು, ಬಳಿಕ ಹೈಕಮಾಂಡ್‌ ಸಿಎಂ ಹೆಸರನ್ನು ಪ್ರಕಟ ಮಾಡಲಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com