ಮಂಗಳೂರು: ರಾಜ್ಯ ವಿಧಾನಸಭೆಗೆ ಬುಧವಾರ ನಡೆವ ಸಾರ್ವತ್ರಿಕ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದ್ದು, 3 ಗಂಟೆ ವೇಳೆ ಜಿಲ್ಲೆಯಲ್ಲಿ ಒಟ್ಟು ಶೇ 56.35 ಮತದಾನವಾಗಿದೆ.
ಪುತ್ತೂರಿನಲ್ಲಿ ಗರಿಷ್ಠ ಶೇ 61.45, ಮಂಗಳೂರು ದಕ್ಷಿಣದಲ್ಲಿ ಶೇ 49.29 ಮಂದಿ ಹಕ್ಕು ಚಲಾಯಿಸಿದ್ದಾರೆ. ಬೆಳ್ತಂಗಡಿ ಶೇ 59.02, ಮೂಡುಬಿದಿರೆ ಶೇ 57.38, ಮಂಗಳೂರು ನಗರ ಉತ್ತರ ಶೇ 55.15, ಮಂಗಳೂರು ಶೇ 56.8, ಬಂಟ್ವಾಳ ಶೇ 53.26, ಸುಳ್ಯ ಶೇ 59.65 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಬೆಳ್ತಂಗಡಿ ಶೇ 44.82, ಮೂಡುಬಿದರೆ ಶೇ 44. 45, ಮಂಗಳೂರು ನಗರ ಉತ್ತರ ಶೇ 43.43, ಮಂಗಳೂರು ನಗರ ದಕ್ಷಿಣ ಶೇ 38.44, ಮಂಗಳೂರು ಶೇ 43.85, ಬಂಟ್ವಾಳ ಶೇ 46. 53, ಪುತ್ತೂರು ಶೇ 47.47, ಸುಳ್ಯ ಶೇ 45.10 ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.
ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಡಾ. ಮಂಜುನಾಥ ಭಂಡಾರಿ ಅವರು ಕದ್ರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದರು.
ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರು ಕದ್ರಿ ಕೆಪಿಟಿ ಬೂತ್ ಸಂಖ್ಯೆ 132 ರಲ್ಲಿ ಮತ ಚಲಾಯಿಸಿದರು.
ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕ ಮತ್ತು ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಬೋಳಿಯಾರ್ ಗ್ರಾಮದ ಜಾರದಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.