Breaking News

ಪಕ್ಷಾತೀತವಾಗಿ ಜನರ ಕೆಲಸ ಮಾಡುವೆ: ಅಶೋಕ್ ಕುಮಾರ್ ರೈ

 

ವಿಟ್ಲ: ಬಸವ ವಸತಿ ಸೇರಿದಂತೆ ವಿವಿಧ ಯೋಜನೆ ಅಡಿ ಗ್ರಾಮ ಪಂಚಾಯಿತಿ ಮೂಲಕ ಗ್ರಾಮಸ್ಥರಿಗೆ ನೀಡುತ್ತಿದ್ದ ಮನೆಯನ್ನು ರಾಜ್ಯ ಬಿಜೆಪಿ ಸರಕಾರ ಬಡವರಿಗೆ ನೀಡದೆ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಆರೋಪಿಸಿದ್ದಾರೆ.

ಪೆರುವಾಯಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಬರುವುದಾದರೆ ಸ್ವಾಗತವಿದೆ. ಭಯ ಪಡಬೇಡಿ ನಿಮ್ಮ ಶಾಸಕರಿರುವಾಗಲೇ ನಿಮ್ಮ ಕೆಲಸ ಆಗಲಿಲ್ಲ, ಅಕ್ರಮ ಸಕ್ರಮ ಮಾಡಿಕೊಡಲಿಲ. ನಾನು ಶಾಸಕನಾದರೆ ಪಕ್ಷ ಭೇದವಿಲದೆ ಎಲ್ಲರಿಗೂ ನೆರವು ನೀಡುತ್ತೇನೆ. ಅಶೋಕ್ ರೈ ಎಂದಿಗೂ ಮೋಸ ಮಾಡುವುದಿಲ್ಲ. ಕೊಟ್ಟ ಮಾತನ್ನು ತಪ್ಪಲಾರೆ ಎಂದು ಹೇಳಿದರು.

  1.  

ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅಶೋಕ್ ರೈ ಗೆದ್ದರೆ ಅವರೊಟ್ಟಿಗೆ ಹೋಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಗೆದ್ದರೆ ಕಾಂಗ್ರೆಸ್ ನಲ್ಲೇ ಇರುವೆ ಎಲ್ಲರ ಸೇವೆ ಮಾಡುವೆ. ದುಷ್ಡ ಬುದ್ದಿ ನನಗಿಲ್ಲ. ನನ್ನ ತಂದೆ ಶಾಲೆ ಮೇಸ್ಟ್ರು ಆಗಿದ್ದರು. ಮೇಸ್ಡ್ರ ಮಗ ಯಾರ ಮನಸ್ಸಿಗೂ ನೋವು ಕೊಟ್ಟಿಲ್ಲ, ಕೊಡುವುದೂ ಇಲ್ಲ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಅಭ್ಯರ್ಥಿ ಅಶೋಕ್ ರೈ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ರಾಜೇಂದ್ರ ರೈ ಬೈಲುಗುತ್ತು, ನಾರಾಯಣ ಪೂಜಾರಿ ನೀರ್ ಮಜಲು, ಕುಂಞಣ್ಣ ರೈ ಮಲ್ಲಿಕಟ್ಟೆ, ಜಾನು ನಾಯ್ಕ ನೀರ್ ಮಜಲು, ಸುಂದರ ಸಾಲ್ಯಾನ್, ಚಿದಾನಂದ ಬೈಲಡ್ಕ, ಬಾಲಕೃಷ್ಣ ರೈ ಬೈಲು ಗುತ್ತು

ಮೋಹನ ತೋರಣಕಟ್ಟೆ, ವೆಂಕಪ್ಪ ತೋರಣಕಟ್ಟೆ ಕಾಂಗ್ರೆಸ್ ಸೇರ್ಪಡೆಯಾದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com