ಮಂಗಳೂರು: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಬರಲಿದೆ. ಈಗಿನ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ಸಾಮಾನ್ಯ ಜನರು ಅವರ ಆಡಳಿತದಿಂದ ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಐವನ್ ಡಿಸೋಜ ಹೇಳಿದರು.
ಇಲ್ಲಿನ 39ನೇ ಫಳ್ನಿರ್ ವಾರ್ಡ್ ನಲ್ಲಿ ಬುಧವಾರ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು.
ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಅವರು ಮಾತನಾಡಿ, ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನಿರೀಕ್ಷಿಸುವಂತಿಲ್ಲ. ಬಂಡವಾಳ ಹೂಡಿಕೆ ಮಂಗಳೂರಿಗೆ ತರಲು ಬಿಜೆಪಿ ಸರಕಾರ ತಯಾರಿಲ್ಲ. ಉನ್ನತ ಶಿಕ್ಷಣ ಕಲಿತ ವಿದ್ಯಾರ್ಥಿಗಳಿಗೆ ಕೆಲಸವೇ ಇಲ್ಲ. ಕೆಲಸಕ್ಕೆ ವಿದೇಶಕ್ಕೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಮನೆಯಲ್ಲಿ ತಂದೆ ತಾಯಂದಿರು ಕಷ್ಟದಲ್ಲಿ ಇದ್ದಾರೆ. ಇದನ್ನು ನಿಭಾಯಿಸಲು ಒಳ್ಳೆಯ ಸ್ಥಿರ ಸರಕಾರ ಬೇಕು. ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಆದ್ದರಿಂದ ಕಾಂಗ್ರೆಸ್ ಸರಕಾರ ಬರಲು ನಾವೆಲ್ಲರೂ ಬಹಳಷ್ಟು ಶ್ರಮಿಸಬೇಕು ಎಂದರು.
ಡಾ.ಕವಿತಾ ಡಿಸೋಜ, ಅಪ್ಪಿ, ರಮಾನಂದ ಪೂಜಾರಿ, ಆಶೀತ್ ಪಿರೇರಾ,ಟಿ.ಕೆ. ಸುಧೀರ್, ಸುಹೆಲ್ ಕಂದಕ್, ಎಸ್. ಕೆ. ಸವಾನ್, ಶೈಲಾ ನೀತಾ ಡಿಸೋಜ, ಅನಿಲ್ ಲೋಬೊ, ಓಸ್ವಲ್ಡ್ ಫುರ್ಟಾಡೊ ಇದ್ದರು.