Breaking News

ಕ್ಷೇತ್ರದ ಅಭಿವೃದ್ದಿಗೆ ಮಿಡಿಯುವ ರೈ: ಅಶ್ವನಿ ಕುಮಾರ್

 

ಬಂಟ್ವಾಳ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ನಡೆಸುವ ಜತೆಗೆ ಜನರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಜನಪರ ಚಿಂತನೆಯ ರಾಜಕಾರಣಿ ಬಿ ರಮಾನಾಥ ರೈ ಅವರನ್ನು ಕ್ಷೇತ್ರದ ಜನಪರ ಹಿತದೃಷ್ಟಿಯಿಂದ ಗೆಲ್ಲಿಸುವುದು ಅಗತ್ಯ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಅಶ್ವನಿ ಕುಮಾರ್ ರೈ ಹೇಳಿದರು

ಬಿ.ಸಿ. ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ,  ವೀರಪ್ಪ ಮೊಯಿಲಿ, ಎಸ್ ಎಂ ಕೃಷ್ಣ ಹಾಗೂ ಸಿದ್ದರಾಮಯ್ಯ ಅವರಂತಹ ಘಟಾನುಘಟಿ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಮೂರು ಬಾರಿ ಮಂತ್ರಿಗಳಾಗಿ ಕೆಲಸ ಮಾಡಿದ ರಮಾನಾಥ ರೈ ಅವರು ಕ್ಷೇತ್ರದ ಜನರ ಚಿಂತನೆಯಲ್ಲೇ ದಿನ ಕಳೆದು ಸ್ವಕ್ಷೇತ್ರದಲ್ಲೇ ಉಳಿದುಕೊಂಡಿದ್ದಾರೆ. ಜನಸೇವೆ ಮಾಡಿರುವ ಅಪರೂಪದ ರಾಜಕಾರಣಿಗಳಾಗಿದ್ದಾರೆ, ಕ್ಷೇತ್ರದ ಜನರ ಬೇಕುಬೇಡಗಳಿಗೆ ಸ್ಪಂದಿಸುವುದರ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶಕ್ತಿ ಮೀತಿರಿ ದುಡಿಯುತ್ತಿದ್ದಾರೆ ಎಂದರು.

  1.  

ಕಳೆದ ಬಾರಿ ಅಪಪ್ರಚಾರದಿಂದ ರೈ ಅವರನ್ನು ವಿರೋಧಿಗಳು ಸೋಲಿಸಿದ್ದಾರೆಯೇ ಹೊರತು, ಅಭಿವೃದ್ದಿ ಪರವಾಗಿ ಅವರನ್ನು ಎದುರಿಸಲು ಯಾರಿಂದಲೂ ಯಾವತ್ತೂ ಸಾಧ್ಯವಿಲ್ಲ. ಶಾಸಕ ಅಲ್ಲದಿದ್ದರೂ, ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ ರಮಾನಾಥ ರೈ ಅವರು ಸದಾ ಸಮಯ ಕ್ಷೇತ್ರಕ್ಕಾಗಿ ದುಡಿದ ಅಪರೂಪದ ರಾಜಕಾರಣಿ ಎಂದರು.

ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಹಿರಿಯ ಕಾಂಗ್ರೆಸ್ಸಿಗರಾದ ಹಾಜಿ ಬಿ.ಎಚ್. ಖಾದರ್, ಬಾಲಚಂದ್ರ ಶೆಟ್ಟಿ, ಪ್ರಮುಖರಾದ ಬಿ.ಎಂ.ಅಬ್ಬಾಸ್ ಅಲಿ, ಲುಕ್ಮಾನ್ ಬಂಟ್ವಾಳ,, ಪದ್ಮಶೇಖರ ಜೈನ್, ಸುದರ್ಶನ್ ಜೈನ್, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಜೆಸಿಂತಾ, ಮುಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ, ಮುಹಮ್ಮದ್ ವಳವೂರು, ಪಿ..ರಹೀಂ, ಇಬ್ರಾಹಿಂ ಕೈಲಾರ್ಚಂದ್ರಶೇಖರ ಪೂಜಾರಿ, ರಫೀಕ್ ಹಾಜಿ ಆಲಡ್ಕ, ಕಾಸಿಂ ಶಾಂತಿ ಅಂಗಡಿ, ಆದಂ ಪಲ್ಲ, ಸಮೀರ್ ಶಾಂತಿ ಅಂಗಡಿ, ಪದ್ಮನಾಭ ಸಾಮಂತ್  ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com