ಕಾರವಾರ: ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹೈಕಮಾಂಡ್ ಯಾವುದೇ ಸರ್ಜರಿಗೆ ಮುಂದಾಗಿಲ್ಲ. ಹಿಂದೆ ಇದ್ದ ಹಳಬರಿಗೆ ಬಹುತೇಕ ಟಿಕೆಟ್ ಘೋಷಣೆ ಮಾಡಲಾಗಿದೆ.
ಕಾರವಾರ ಕ್ಷೇತ್ರಕ್ಕೆ ರೂಪಾಲಿ ನಾಯ್ಕ್, ಭಟ್ಕಳಗೆ ಸುನೀಲ್ ನಾಯ್ಕ್, ಸಿರಸಿಗೆ ವಿಶ್ವೇಶರ ಹೆಗಡೆ ಕಾಗೇರಿ, ಯಲ್ಲಾಪುರ ಕ್ಷೇತ್ರಕ್ಕೆ ಶಿವರಾಮ್ ಹೆಬ್ಬಾರ್, ಕುಮಟಾಕ್ಕೆ ದಿನಕರ ಶೆಟ್ಟಿ, ಹಳಿಯಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಸುನಿಲ್ ಹೆಗಡೆ ಅವರಿಗೆ ಟಿಕೆಟ್ ನೀಡಲಾಗಿದೆ.
ಕುಮಟಾ ಹಾಗೂ ಭಟ್ಕಳ ಕ್ಷೇತ್ರಕ್ಕೆ ಹಾಲಿ ಶಾಸಕರಿಗೆ ಕೋಕ್ ನೀಡಲಾಗುತ್ತೆ ಎಂಬ ಮಾತು ಬಾರಿ ಚರ್ಚೆಯಲ್ಲಿ ಇತ್ತು. ಆದರೆ ಆದ್ಯಾವುದು ಆಗಿಲ್ಲ. ಸಿರಸಿಯಲ್ಲಿ ಕೂಡ ಹೊಸ ಮುಖಕ್ಕೆ ಅವಕಾಶ ಕೊಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅಲ್ಲಿ ಹಾಲಿ ಶಾಸಕ ಕಾಗೇರಿ ಅವರಿಗೆ ಮಣೆ ಹಾಕಲಾಗಿದೆ. ಪಕ್ಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೇಜರ್ ಸರ್ಜರಿ ಮಾಡಿರುವ ಪಕ್ಷ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಯಾವುದೇ ಬದಲಾವಣೆಗೆ ಮುಂದಾಗದೇ ಇರುವುದು ಹಾಲಿ ಟಿಕೆಟ್ ಪಡೆದವರಲ್ಲಿ ನಿರಾಳ ಭಾವನೆ ಮೂಡಿಸಿದೆ.