Breaking News

ಹೀಗಿದೆ ನಿಮ್ಮ ಶುಕ್ರವಾರದ ರಾಶಿಫಲ

 

ಸಿಂಹ ರಾಶಿಯವರ ಆರ್ಥಿಕ ಜೀವನವು ಆರಾಮದಾಯಕವಾಗಿ ಇರಲಿದೆ, ಕುಂಭ ರಾಶಿಯವರಿಗೆ ಇಷ್ಟು ದಿನ ನಿಮ್ಮ ಹೆಗಲ ಮೇಲೆ ಇದ್ದ ದೊಡ್ಡ ಜವಾಬ್ದಾರಿ ಕೆಳಗಿಳಿಯಲಿದೆ.

ವೃಶ್ಚಿಕ : ಯಾವುದೇ ಕಾರಣಕ್ಕೂ ಧರ್ಮದ ದಾರಿಯನ್ನು ಬಿಡಬೇಡಿ. ಯಾವುದೇ ನಕಾರಾತ್ಮಕ ವಿಚಾರಗಳಿಗೆ ಕಿವಿಕೊಡಲು ಹೋಗಬೇಡಿ. ಸಹೋದ್ಯೋಗಿಗಳು ನಿಮ್ಮ ಅನುಪಸ್ಥಿತಿಯ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಹನುಮಾನ್ ಚಾಲೀಸಾ ಪಠಿಸಿ.

ಕುಂಭ: ಇಷ್ಟು ದಿನ ನಿಮ್ಮ ಹೆಗಲ ಮೇಲೆ ಇದ್ದ ದೊಡ್ಡ ಜವಾಬ್ದಾರಿಯೊಂದು ಇಂದು ಕೆಳಗಿಳಿಯಲಿದೆ. ಅಂದುಕೊಂಡ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸುವರು. ದೇವರ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಆರೋಗ್ಯದ ಮೇಲೆ ಕಾಳಜಿ ಇರಲಿ.

ಮೀನ : ಕೆಲವು ದಾನ ಧರ್ಮಗಳಲ್ಲಿ ನಿಮ್ಮನ್ನು ನೀವು ವಿನಿಯೋಗಿಸಿಕೊಂಡಲ್ಲಿ ಪುಣ್ಯ ಪ್ರಾಪ್ತಿಯಾಗಲಿದೆ. ಕಚೇರಿಯಲ್ಲಿ ನೀವಿಂದು ಒಳ್ಳೆಯ ಸುದ್ದಿ ಕೇಳಲಿದ್ದೀರಿ. ದಿಢೀರ್​ ಪ್ರಯಾಣ ಕೈಗೊಳ್ಳಬೇಕಾಗಿ ಬರಲಿದೆ. ಹೊಸ ಉದ್ಯೋಗಾವಕಾಶವೊಂದು ನಿಮ್ಮನ್ನು ಅರಸಿ ಬರಲಿದೆ.

ಸಿಂಹ : ಇಂದು ನಿಮ್ಮ ಆರ್ಥಿಕ ಜೀವನವು ಆರಾಮದಾಯಕವಾಗಿ ಇರಲಿದೆ. ಹೊಸ ಕಚೇರಿಗೆ ಹಂತ ಹಂತವಾಗಿ ಒಗ್ಗಿಕೊಳ್ಳಲಿದ್ದೀರಿ. ಹೊಸ ಹೊಸ ಸ್ನೇಹಿತರನ್ನು ಸಂಪಾದಿಸಲಿದ್ದೀರಿ. ತರಕಾರಿ ವ್ಯಾಪಾರಿಗಳಿಗೆ ಈ ದಿನ ಶುಭದಿನವಾಗಿದೆ.

ಕನ್ಯಾ : ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಯಾವುದೇ ವಸ್ತುಗಳ ಮೇಲೆ ವಿನಿಯೋಗ ಮಾಡುವ ಮುನ್ನ ನೀವು ನೂರು ಬಾರಿ ಯೋಚಿಸುವುದು ಉತ್ತಮ. ಯಾವುದೇ ಕೆಲಸದಲ್ಲಿ ಶಿಸ್ತು ಕಾಪಾಡಿಕೊಳ್ಳಿ. ಯಾವುದೇ ವಿಚಾರದಲ್ಲಿ ನಿಮ್ಮ ನಿರ್ಧಾರ ಘೋಚಿಸುವ ಮುನ್ನ ಸ್ಥಿರತೆ ಕಾಪಾಡಿಕೊಳ್ಳಿ.

ಧನು : ಆರ್ಥಿಕ ವಿಚಾರಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಕೆಲಸದ ಸ್ಥಳಗಳಲ್ಲಿ ನೆಮ್ಮದಿ ಇರಲಿದೆ. ಶೀಘ್ರದಲ್ಲಿಯೇ ಗ್ರಹಸ್ಥಾಶ್ರಮಕ್ಕೆ ಕಾಲಿಡಲಿದ್ದೀರಿ. ಯೋಗಾಸನಗಳನ್ನು ಮಾಡಿ. ಇದರಿಂದ ನಿಮಗೆ ಒಳ್ಳೆಯದು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಧೈರ್ಯ ತಂದುಕೊಳ್ಳಿ.

  1.  

ಮಕರ : ಅಡಿಕೆ ವ್ಯಾಪಾರಿಗಳಿಗೆ ಈ ದಿನ ಶುಭದಿನವಾಗಿದೆ. ಇಂದು ನೀವು ಅನೇಕ ವಿಚಾರಗಳಲ್ಲಿ ಲಾಭ ಪಡೆಯಲಿದ್ದೀರಿ. ಕೌಟುಂಬಿಕ ಗೊಂದಲಗಳನ್ನು ನಿಭಾಯಿಸುವಲ್ಲಿ ಸಂಗಾತಿಯು ನಿಮಗೆ ಸಾಥ್​ ನೀಡಲಿದ್ದಾರೆ.

ತುಲಾ : ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಮುಂದುವರಿಯಲಿದೆ. ಹಿರಿಯರೊಂದಿಗೆ ಸಾಮರಸ್ಯದಿಂದ ವರ್ತಿಸಲಿದ್ದೀರಿ. ತಾಳ್ಮೆಯೊಂದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬುದು ನಿಮ್ಮ ಗಮನದಲ್ಲಿ ಇರಲಿ .

ಮಿಥುನ : ಮಾತಿನ ಚಾಣಾಕ್ಷತನದಿಂದ ನೀವು ಎಲ್ಲರೆದುರು ಒಳ್ಳೆಯವರು ಎನಿಸಿಕೊಳ್ಳಲಿದ್ದೀರಿ. ಆದರೆ ಆತ್ಮಸಾಕ್ಷಿಯೆದುರು ಸುಳ್ಳು ಹೇಳಲು ಸಾಧ್ಯವಿಲ್ಲ. ಕಚೇರಿ ಕೆಲಸದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ನಿಮಗೆ ದೊಡ್ಡ ಸಂಕಷ್ಟ ಕಾದಿದೆ.

ಕಟಕ : ಅನಿರೀಕ್ಷಿತವಾಗಿ ಇಂದು ನಿಮ್ಮ ಮನೆಗೆ ಅತಿಥಿಗಳು ಆಗಮಿಸಲಿದ್ದಾರೆ. ಜವಳಿ ಉದ್ಯಮಿಗಳಿಗೆ ಇಂದು ಲಾಭದ ದಿನವಾಗಿದೆ. ಹೊಸ ಜನರ ಜೊತೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರುವುದು ಅಗತ್ಯ. ಇಲ್ಲವಾದಲ್ಲಿ ಇಲ್ಲದ ವಿವಾದ ಮೈಮೇಲೆ ಎಳೆದುಕೊಳ್ಳಲಿದ್ದೀರಿ.

ಮೇಷ : ವ್ಯಾಪಾರ ವ್ಯವಹಾರಗಳಲ್ಲಿ ಇಂದು ನೀವು ಲಾಭ ಗಳಿಸಲಿದ್ದೀರಿ. ಇಂದು ಹೊಸ ಉದ್ಯೋಗಾವಕಾಶವೊಂದು ಇಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವೃತ್ತಿ ಜೀವನದಲ್ಲಿ ಹೊಂದಾಣಿಕೆ ಇರಲಿದೆ.

ವೃಷಭ : ಹೊಸ ವಾಹನ ಖರೀದಿ ಮಾಡುವವರಿಗೆ ಈ ದಿನ ಶುಭ ದಿನವಾಗಿದೆ. ಶುಭಕಾರ್ಯಗಳು ಮಂಗಳಕರ ರೀತಿಯಲ್ಲಿ ಸಾಗಲಿದೆ. ಹನುಮಂತನಿಗೆ ತೆಂಗಿನ ಕಾಯಿಯನ್ನು ಅರ್ಪಿಸಿ ಬಳಿಕ ಹೊಸ ಉದ್ಯಮಗಳಲ್ಲಿ ಹಣ ವಿನಿಯೋಗ ಮಾಡಿ.

 

  1.  

Leave a Reply

Your email address will not be published. Required fields are marked *