Breaking News

ದಾಖಲೆ ಇಲ್ಲದ ಬೆಳ್ಳಿ ಸಾಗಣೆ: ಇಬ್ಬರನ್ನು ಬಂಧಿಸಿದ ಭಟ್ಕಳ ಪೊಲೀಸರು

 

ಕಾರವಾರ (ಭಟ್ಕಳ): ದಾಖಲೆ ಇಲ್ಲದೆ ಬೆಳ್ಳಿ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಾಹನ ಸಮೇತ ಭಟ್ಕಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  1.  

ಉಡುಪಿ ತಾಲೂಕಿನ ಇಂದ್ರಾಳ್ಳಿ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಉಮೇಶ ಜನಾರ್ದನ ಆಚಾರ್ಯ ಹಾಗೂ ಉಡುಪಿ ಅಂಬಾಬಾಗಿಲು ಕುಕ್ಕಂಜೆ ನಿವಾಸಿ ರವಿ ಶೀನಾ ಆಚಾರ್ಯ ಬಂಧಿತರು.

ಇವರು ಉಡುಪಿಯಿಂದ ಹೊನ್ನಾವರದ ಕಡೆಗೆ 7.5 ಲಕ್ಷ ರೂ. ಮೌಲ್ಯದ 10 ಕೆಜಿ 820 ಗ್ರಾಂ ತೂಕದ ಬೆಳ್ಳಿಯನ್ನು ದಾಖಲೆ ಇಲ್ಲದೆ ಸಾಗಿಸುತ್ತಿದ್ದರು. ಚೆಕ್‌ಪೋಸ್ಟನಲ್ಲಿ ಪೊಲೀಸರು ತಪಾಸಣೆ ನಡೆಸುವಾಗ ಸಂಶಯಾಸ್ಪದವಾಗಿ ರೀತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಭಟ್ಕಳ ಶಹರ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com