Breaking News

ಹೊನಲು‌ ಬೆಳಕಿನ ನರಿಂಗಾನ‌ ಕಂಬಳೋತ್ಸವ ಸಮಾರೋಪ

 

ಮಂಗಳೂರು: ನರಿಂಗಾನ‌ ಗ್ರಾಮದ ಮೋರ್ಲ ಬೋಳದಲ್ಲಿ  ನಡೆದ ಪ್ರಥಮ‌ ವರ್ಷದ ಲವ-ಕುಶ ಜೋಡುಕರೆ ಹೊನಲು‌ ಬೆಳಕಿನ ನರಿಂಗಾನ‌ ಕಂಬಳೋತ್ಸವ ಸಮಾರೋಪವು ನಡೆಯಿತು.

  1.  

ಸಮಾರೋಪದಲ್ಲಿ ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಶೆಟ್ಟಿ ಅಧ್ಯಕ್ಷತೆ  ವಹಿಸಿದ್ದರು.  ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಯು.ಟಿ. ಖಾದರ್, ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಉಪಾಧ್ಯಕ್ಷರುಗಳಾದ ಚಂದ್ರಹಾಸ್ ಶೆಟ್ಟಿ ಮೋರ್ಲ, ಕರುಣಾಕರ ಶೆಟ್ಟಿ ಮೋರ್ಲ ಹಾಗೂ ಮ್ಯಾಕ್ಸಿಮ್ ಡಿಸೋಜ, ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ, ಸಂಚಾಲಕ ನಾಸಿರ್ ನಡುಪದವು, ಮುರಳೀಧರ ಶೆಟ್ಟಿ ಮೋರ್ಲ, ಮಹಿಳಾ ವಿಭಾಗ ಅಧ್ಯಕ್ಷೆ ಮಮತಾ ಗಟ್ಟಿ, ಸಹ ಸಂಚಾಲಕ ಜೋಸೆಫ್ ಕುಟಿನ್ಹಾ ಬೋಳ, ವಿನಯ್ ಶೆಟ್ಟಿ ನಾರ್ಲ, ಅಝೀಝ್ ಆರ್ ಆರ್ ಕೆ ಸಿ, ಸುಂದರ ಪೂಜಾರಿ ಕೋಡಿಮಜಲು, ಕೋಶಾಧಿಕಾರಿ ಜಲೀಲ್ ಮೋಂಟುಗೋಳಿ, ಕಾರ್ಯದರ್ಶಿ ಸಿದ್ದಿಕ್ ಪಾರೆ, ಜೊತೆ ಕಾರ್ಯದರ್ಶಿಗಳಾದ ಪ್ರೇಮಾನಂದ ರೈ ನೆತ್ತಿಲಕೋಡಿ, ವೈಭವ್ ತಲಪಾಡಿ ಮೊದಲಾದ  ಪ್ರಮುಖರ ಉಪಸ್ಥಿತಿಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತೀರ್ಪುಗಾರ ಎಡ್ತೂರು ರಾಜೀವ್ ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು.  ನವಾಝ್  ಸ್ವಾಗತಿಸಿದರು.  ಸತೀಶ್ ಕುಮಾರ್ ಪುಂಡಿಕಾಯಿ, ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ‌ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com