ಪುತ್ತೂರು: ಬಲ್ನಾಡು ಗ್ರಾಮದ ವಿನುಶ್ರೀ ಕೆಲ್ಲಾಡಿ ಮನೆ ಅವರು ಹರಿಯಾಣದಲ್ಲಿ ನಡೆಯುವ 69 ನೇ ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲಿದ್ದಾರೆ. ಅವರು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದು ಅವರಿಗೆ ಊರಿನವರು ಅಭಿನಂದನೆ ಸಲ್ಲಿಸಿದ್ದಾರೆ.
ಪುತ್ತೂರು ಶಾಸಕ ಸಂಜೀವ್ ಮಟಂದೂರು ಅವರು ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆ ಆಗಿರುವ ಬಲ್ನಾಡು ಗ್ರಾಮದ ವಿನುಶ್ರೀ ಕೆಲ್ಲಾಡಿಮನೆ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.