ಕಾರವಾರ (ಸಿರಸಿ): ಬಿಸಿಲಿನ ತಾಪಮಾನದಿಂದ ಸೆಖೆಗೆ ಕಂಗಾಲಾಗಿದ್ದ ಜನರಿಗೆ ಮಂಗಳವಾರ ಸಂಜೆ ಮಳೆ ತಂಪೆರೆದಿದೆ.
ಮಂಗಳವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು, ಬಿಸಿಲಿನ ಧಗೆ ಹೆಚ್ಚಾಗಿತು ಮಳೆ ಸುರಿಯಬಹುದು ಎಂದು ಲೆಕ್ಕಾಚಾರದಲ್ಲಿ ಜನರಿಗೆ ಸಂಜೆ 4.30 ರ ವೇಳೆಗೆ ಮಳೆ ಸುರಿಯಿತು. ಹದ ಮಳೆ ಸುರಿದ ಕಾರಣಕ್ಕೆ ಸಂಜೆ ಶಾಲೆ ಬಿಡುವ ವೇಳೆ ಮನೆಗೆ ಬರುವ ಮಕ್ಕಳು ಪರದಾಡಿದರು. ಗ್ರಾಮೀಣ ಭಾಗದಲ್ಲೂ ಮಳೆಯಾದ ಸುರಿದಿದೆ. ಪರಿಣಾಮ ಕೃಷಿಕರಿಗೂ ಸಮಸ್ಯೆ ಉಂಟಾಗಿದೆ.